
ಆನೇಕಲ್ (ಫೆ. 21): ಅಮಿತ್ ಷಾ ಕರ್ನಾಟಕಕ್ಕೆ ಬರುತ್ತಿರುವುದರಿಂದ ಉತ್ತರ ಭಾರತದ ಸಂಸ್ಕೃತಿ ಆರಂಭವಾಗುತ್ತಿದೆಯೆಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಅಮಿತ್ ಷಾ ವಿರುದ್ದ ಮತ್ತೊಮ್ಮೆ ರಾಮಲಿಂಗಾರೆಡ್ಡಿ ಗುಡುಗಿದ್ದಾರೆ. ಮಂಗಳೂರಿನ ಮಲ್ಪೆ ಬಳಿ ಬಸ್ ಮೇಲೆ ಕಲ್ಲು ತೂರಾಟ ಘಟನೆಗೆ ಬಿಜೆಪಿಯವರೇ ಕಾರಣವೆಂದು ರಾಮಲಿಂಗಾರೆಡ್ಡಿಯವರು ಬಿಜೆಪಿಗೆ ತಿರುಗು ಬಾಣವಾಗಿಸಿದರು.
ನಲಪಾಡ್ ಘಟನೆ ಬಗ್ಗೆ ಮಾತಾನಾಡಿದ ಗೃಹ ಸಚಿವರು, ಪ್ರಕರಣ ಇದೀಗ ನ್ಯಾಯಾಲಯದಲ್ಲಿದೆಯೆಂದು ಜಾರಿಕೊಂಡರು. ಕಲ್ಕೆರೆ ನಾರಾಯಣಸ್ವಾಮಿ ಪ್ರಕರಣದ ಬಗ್ಗೆ ನಾರಾಯಣಸ್ವಾಮಿಯನ್ನು ಆದಷ್ಟು ಬೇಗ ಬಂಧಿಸುತ್ತೇವೆಂದು ಭರವಸೆ ನೀಡಿದರು. ಈ ಪ್ರಕರಣಗಳಿಂದ ಪಕ್ಷಕ್ಕೆ ಇರುಸುಮುರುಸು ಉಂಟಾಗಿದೆಯೆಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.