
ಧರ್ಮಶಾಲಾ (ಜ.19): ಮುಖ್ಯಮಂತ್ರಿ ವೀರಭದ್ರ ಸಿಂಗ್ ಧರ್ಮಶಾಲಾವನ್ನು ಹಿಮಾಚಲ ಪ್ರದೇಶದ 2 ನೇ ರಾಜಧಾನಿಯಾಗಿ ಘೋಷಿಸಿದ್ದಾರೆ.
ವೀರಭದ್ರಸಿಂಗ್ ಇತ್ತೀಚಿಗೆ ಧರ್ಮಶಾಲಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದನ್ನು 2 ನೇ ರಾಜಧಾನಿಯಾಗಿ ಮಾಡುವುದಾಗಿ ಘೋಷಿಸಿದ್ದರು. ರಾಜ್ಯ ಸರ್ಕಾರ ಕೂಡಾ ವರ್ಷದಲ್ಲಿ 2 ತಿಂಗಳು ಧರ್ಮಶಾಲಾವನ್ನು ಚಳಿಗಾಲದ ರಾಜಧಾನಿಯಾಗಿ ಮಾಡಲು ಚಿಂತನೆ ನಡೆಸಿತ್ತು.
ಧರ್ಮಶಾಲಾಗೆ ತನ್ನದೇ ಆದ ಪ್ರಾಮುಖ್ಯತೆಯಿದೆ ಮತ್ತು ಇತಿಹಾಸವಿದೆ. ರಾಜ್ಯದ 2 ನೇ ರಾಜಧಾನಿಯಾಗುವ ಎಲ್ಲಾ ಅರ್ಹತೆಯಿದೆಯೆಂದು ಮುಖ್ಯಮಂತ್ರಿ ವೀರ್ ಭದ್ರ ಸಿಂಗ್ ಹೇಳಿದ್ದಾರೆ.
ರಾಜ್ಯದ ಕಂಗ್ರ, ಚಂಬಾ. ಹಮೀರ್ ಪುರ್ ಮತ್ತು ಉನಾ ಜಿಲ್ಲೆಗಳ ಜನರು ತಮ್ಮ ಕಚೇರಿ ಕೆಲಸಕ್ಕಾಗಿ ದೂರದವರೆಗೆ ಬರಬೇಕಾಗಿತ್ತು. ಧರ್ಮಶಾಲಾವನ್ನು 2 ನೇ ರಾಜಧಾನಿಯಾಗಿ ಮಾಡಿರುವುದರಿಂದ ಆ ಭಾಗದ ಜನರಿಗೆಲ್ಲಾ ಅನುಕೂಲವಾಗಿದೆ ಎಂದು ವೀರಭದ್ರಸಿಂಗ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.