
ನವದೆಹಲಿ(ನ.14): ಏಟಿಎಂ ಯಂತ್ರದಿಂದ ಹಣ ತೆಗೆಯುವ ಹಾಗೂ ವಿನಿಮಯ ಮಾಡಿಕೊಳ್ಳುವ ಮಿತಿಯನ್ನು ಕೇಂದ್ರ ಸರ್ಕಾರ ಏರಿಸಿದೆ. ಆದರೆ ಅದು ಕೇವಲ ಮರು-ಹೊಂದಾಣಿಕೆ ಮಾಡಿರುವ ಏಟಿಎಂ ಯಂತ್ರಗಳಲ್ಲಿ ಮಾತ್ರ ಎಂದು ಹಣಕಾಸು ವ್ಯವಹಾರ ಇಲಾಖೆ ಕಾರ್ಯದರ್ಶಿ ಸ್ಪಷ್ಟೀಕರಣ ನೀಡಿದ್ದಾರೆ.
ದಿನವೊಂದಕ್ಕೆ ಹಣ ತೆಗೆಯುವ ಮಿತಿಯನ್ನು ರೂ.2 ಸಾವಿರದಿಂದ ರೂ.2.500, ವಾರಕ್ಕೆ ರೂ.20 ಸಾವಿರದಿಂದ ರೂ.24 ಸಾವಿರಕ್ಕೆ ಏರಿಸಲಾಗಿದೆ. ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳುವ ಮಿತಿಯನ್ನು ದಿನವೊಂದಕ್ಕೆ 4 ಸಾವಿರದಿಂದ 4,500ಕ್ಕೆ ಹೆಚ್ಚಿಸಲಾಗಿದೆ.
ತಮ್ಮ ಖಾತೆಯಿಂದ ಕೇವಲ ರೂ.10 ಸಾವಿರ ವಿತ್’ಡ್ರಾ ಮಾಡಲು ಇದ್ದ ನಿರ್ಬಂಧವನ್ನು ಕೂಡಾ ಸಡಿಲಿಸಲಾಗಿದೆ. ಆದಷ್ಟು ಹೆಚ್ಚು ಮೈಕ್ರೋ ಏಟಿಎಂಗಳನ್ನು ಸ್ತಾಪಿಸುವುದಾಗಿಯೂ ಹಣಕಾಸು ಇಲಾಖೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.