ಪಕ್ಕದಲ್ಲೇ ಕಾರ್ಯಕ್ರಮಕ್ಕೆ ಹಾಜರ್; ಆದ್ರೆ ಆಸ್ಪತ್ರೆಗೆ ಗೈರು; ಆರೋಗ್ಯ ಸಚಿವರದ್ದು ಯಾಕಿಷ್ಟು ನಿರ್ಲಕ್ಷ್ಯ?

Published : Aug 23, 2017, 03:46 PM ISTUpdated : Apr 11, 2018, 12:57 PM IST
ಪಕ್ಕದಲ್ಲೇ ಕಾರ್ಯಕ್ರಮಕ್ಕೆ ಹಾಜರ್; ಆದ್ರೆ ಆಸ್ಪತ್ರೆಗೆ ಗೈರು; ಆರೋಗ್ಯ ಸಚಿವರದ್ದು ಯಾಕಿಷ್ಟು ನಿರ್ಲಕ್ಷ್ಯ?

ಸಾರಾಂಶ

ಕೋಲಾರ ಜಿಲ್ಲಾಸ್ಪತ್ರೆ ಮುಂದೆ ಹಸಿರು ಸೇನೆ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳು ಸಾವನ್ನಪ್ಪಿದ್ದರೂ ಸ್ಥಳಕ್ಕೆ ಬಾರದ ಆರೋಗ್ಯ ಸಚಿವರ ಧೋರಣೆ ಖಂಡಿಸಿ ದಿಕ್ಕಾರ ಕೂಗಿದ ಪ್ರತಿಭಟನಾಕಾರರು, ರಮೇಶ್ ಕುಮಾರ್ ಭೂತಕ್ಕೆ ಮಕ್ಕಳ ಬೊಂಬೆಗಳನ್ನು ಕಟ್ಟಿ ಜಿಲ್ಲಾಸ್ಪತ್ರೆ ಮುಂದೆ ಧರಣೆ ನಡೆಸಿದ್ದಾರೆ.

ಕೋಲಾರ(ಆ. 23): ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಮಾರಣಹೋಮ ನಡೆಯುತ್ತಿದ್ದರೂ ಸಚಿವರು ಮಾತ್ರ ದಿವ್ಯ ದಿರ್ಲಕ್ಷ್ಯ ತೋರುತ್ತಿದ್ದಾರೆ. ನೇರ ಮಾತಿಗೆ ಹೆಸರಾಗಿರುವ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಮಾತೇ ಬೇರೆ, ಕೃತಿಯೇ ಬೇರೆ ಎಂಬ ಅನುಮಾನ ಮೂಡುತ್ತಿದೆ. ಆಸ್ಪತ್ರೆಯಿಂದ ಕೇವಲ 25 ಕಿಮೀ ದೂರದಲ್ಲಿರುವ ಶ್ರೀನಿವಾಸಪುರದಲ್ಲಿ ದೇವರಾಜ್ ಅರಸು ಜಯಂತ್ಯುತ್ಸವದಲ್ಲಿ ಪಾಲ್ಗೊಂಡಿದ್ದ ರಮೇಶ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ಕೊಡಲು ಮನಸು ಮಾಡುತ್ತಿಲ್ಲ. ಆಸ್ಪತ್ರೆಯ ಸ್ಥಿತಿಗತಿ ವಿಚಾರಿಸುವಷ್ಟೂ ಅವರಿಗೆ ಪುರುಸೊತ್ತು ಇಲ್ಲವಾಗಿದೆ. ಕೋಲಾರ ಆಸ್ಪತ್ರೆಯ ದುರಂತದ ಬಗ್ಗೆ ಮುಖ್ಯಮಂತ್ರಿಗಳೇ ವರದಿ ಕೇಳಿದರೂ ಆರೋಗ್ಯ ಸಚಿವರು ಕ್ಯಾರೆ ಎನ್ನುತ್ತಿಲ್ಲ. ಸಚಿವ ರಮೇಶ್ ಕುಮಾರ್ ಉದ್ದೇಶಪೂರ್ವಕವಾಗಿ ಮೌನವಹಿಸುತ್ತಿದ್ದಾರೆಯೇ?

ಇದೇ ವೇಳೆ, ಕೋಲಾರ ಜಿಲ್ಲಾಸ್ಪತ್ರೆ ಮುಂದೆ ಹಸಿರು ಸೇನೆ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳು ಸಾವನ್ನಪ್ಪಿದ್ದರೂ ಸ್ಥಳಕ್ಕೆ ಬಾರದ ಆರೋಗ್ಯ ಸಚಿವರ ಧೋರಣೆ ಖಂಡಿಸಿ ದಿಕ್ಕಾರ ಕೂಗಿದ ಪ್ರತಿಭಟನಾಕಾರರು, ರಮೇಶ್ ಕುಮಾರ್ ಭೂತಕ್ಕೆ ಮಕ್ಕಳ ಬೊಂಬೆಗಳನ್ನು ಕಟ್ಟಿ ಜಿಲ್ಲಾಸ್ಪತ್ರೆ ಮುಂದೆ ಧರಣೆ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?