
ಬೆಂಗಳೂರು [ಜು.09]: ಹಲವು ಶಾಸಕರು, ಸಚಿವರ ರಾಜೀನಾಮೆಯಿಂದ ಮೈತ್ರಿ ಸರ್ಕಾರದ ಭವಿಷ್ಯ ಅಳಿವು ಉಳಿವಿನ ಅಂಚಿನಲ್ಲಿದೆ. ಸರ್ಕಾರ ಉಳಿಯುತ್ತದೆಯೋ ಇಲ್ಲವೋ ಎನ್ನುವ ಚಿಂತೆಯಲ್ಲಿ ಸಿಎಂ ಕುಮಾರಸ್ವಾಮಿ ಇದ್ದರೆ ಇತ್ತ ಎಚ್.ಡಿ ರೇವಣ್ಣ ಮಾತ್ರ ನಿರಾಳವಾಗಿದ್ದಾರೆ.
ಆದ್ರೆ ಸೂಪರ್ ಸಿಎಂ ರೇವಣ್ಣ ಮಾತ್ರ ಪ್ರಮೋಷನ್ ಮಾಡುವುದರಲ್ಲಿ ಬ್ಯುಸಿಯಲ್ಲಿದ್ದಾರೆ. ಸುಮಾರು 700 ಮಂದಿಗೆ ಪ್ರಮೋಷನ್ ನೀಡಲು ತರಾತುರಿಯಲ್ಲಿ ತಯಾರಿ ನಡೆಸಿದ್ದಾರೆ.
ಒಂದೊಂದು ಪ್ರಮೋಷನ್ ಗೆ 5 ಲಕ್ಷ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಆರೋಪ ಮಾಡಿದ್ದು, ಪ್ರಮೋಷನ್ ನಲ್ಲಿ ಲಿಸ್ಟ್ ಕೂಡ ಸಿದ್ಧ ಮಾಡಿದ್ದಾರೆ. ಇತ್ತೀಚೆಗಷ್ಟೇ 90 ಅಧಿಕಾರಿಗಳನ್ನು ಟ್ರಾನ್ಸ್ ಫರ್ ಮಾಡಿದ ರೇವಣ್ಣ, ಹಿಂಭಡ್ತಿ ಪಡೆದಿದ್ದವರಿಗೆ ಮುಂಭಡ್ತಿ ನೀಡಿ ಟ್ರಾನ್ಸ್ ಫರ್ ಮಾಡಿದ್ದರು.
ಈಗ ಮತ್ತೊಮ್ಮೆ ರೇವಣ್ಣ 700 ಮಂದಿಗೆ ಪ್ರಮೋಷನ್ ನೀಡಲು ತರಾತುರಿಯಲ್ಲಿ ಪಟ್ಟಿ ರೆಡಿ ಮಾಡಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.