ಹಿಂದೂ ನಾಡನ್ನಾಗಿ ಮಾಡಲು ಬಿಡೋದಿಲ್ಲ: ಮೋದಿಗೆ ದೇವೇಗೌಡರ ಸವಾಲು

Published : Sep 16, 2017, 09:40 PM ISTUpdated : Apr 11, 2018, 12:54 PM IST
ಹಿಂದೂ ನಾಡನ್ನಾಗಿ ಮಾಡಲು ಬಿಡೋದಿಲ್ಲ: ಮೋದಿಗೆ ದೇವೇಗೌಡರ ಸವಾಲು

ಸಾರಾಂಶ

"ಮೋದಿಯವರೇ, ರಾಜ್ಯದಲ್ಲಿ ಮುಸ್ಲಿಮರಿರಬಹುದು, ಕ್ರಿಶ್ಚಿಯನ್ನರಿರಬಹುದು, ಹಿಂದೂಗಳು ಇರಬಹುದು. ನಾವು ಸುಖ ಶಾಂತಿಯಿಂದ ಬದುಕಬಾರದ್ವಾ? ಮೋದಿಯವರೇ, ನೀವು ಹಿಂದೂ ರಾಷ್ಟ್ರ ಮಾಡಬೇಕೆಂದು ಪ್ರಯತ್ನ ಪಟ್ಟರೆ... ನನ್ನ ರಾಜ್ಯದಲ್ಲಿ ಅದನ್ನು ಬಿಡೋದಿಲ್ಲ," ಎಂದು ಜೆಡಿಎಸ್ ಮುಖ್ಯಸ್ಥರು ಪಣ ತೊಟ್ಟರು.

ಕಲಬುರ್ಗಿ(ಸೆ. 16): ಪ್ರಧಾನಿ ನರೇಂದ್ರ ಮೋದಿ ದೇಶವನ್ನ ಹಿಂದೂ ದೇಶವನ್ನಾಗಿ ಮಾಡಲು ಹೊರಟಿದ್ದಾರೆ. ಆದ್ರೆ ನನ್ನ ಜನ್ಮವಿರುವವರೆಗೂ ರಾಜ್ಯವನ್ನು ಹಿಂದೂ ನಾಡನ್ನಾಗಿ ಮಾಡಲು ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡ ಪಣ ತೊಟ್ಟಿದ್ದಾರೆ. ಇಲ್ಲಿ ಏರ್ಪಡಿಸಲಾಗಿದ್ದ ಜೆಡಿಎಸ್‌ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ದೇವೇಗೌಡ್ರು, ರಾಜ್ಯದಲ್ಲಿ ಜನತೆ ಸುಖ,  ಶಾಂತಿಯಿಂದ ನೆಮ್ಮದಿಯ ಬದುಕು ಸಾಗಿಸಲು ಬಿಡಿ ಎಂದು ಮೋದಿಗೆ ಮನವಿ ಮಾಡಿಕೊಂಡರು.

"ಮೋದಿಯವರೇ, ರಾಜ್ಯದಲ್ಲಿ ಮುಸ್ಲಿಮರಿರಬಹುದು, ಕ್ರಿಶ್ಚಿಯನ್ನರಿರಬಹುದು, ಹಿಂದೂಗಳು ಇರಬಹುದು. ನಾವು ಸುಖ ಶಾಂತಿಯಿಂದ ಬದುಕಬಾರದ್ವಾ? ಮೋದಿಯವರೇ, ನೀವು ಹಿಂದೂ ರಾಷ್ಟ್ರ ಮಾಡಬೇಕೆಂದು ಪ್ರಯತ್ನ ಪಟ್ಟರೆ... ನನ್ನ ರಾಜ್ಯದಲ್ಲಿ ಅದನ್ನು ಬಿಡೋದಿಲ್ಲ," ಎಂದು ಜೆಡಿಎಸ್ ಮುಖ್ಯಸ್ಥರು ಪಣ ತೊಟ್ಟರು.

ಇದೇ ವೇಳೆ, ನೂತನ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರನ್ನೂ ದೇವೇಗೌಡರು ತರಾಟೆಗೆ ತೆಗೆದುಕೊಂಡರು. ಸುವರ್ಣನ್ಯೂಸ್'ನಲ್ಲಿ ಪ್ರಸಾರವಾದ ಸುದ್ದಿ ವಿಶ್ಲೇಷಣೆಯನ್ನು ಉಲ್ಲೇಖಿಸುತ್ತಾ ಹೇಳಿದ ದೇವೇಗೌಡರು, "ಕೇಂದ್ರದ ಮಂತ್ರಿ ಬೆಂಕಿಯ ಉಂಡೆಯನ್ನು ಕೈಲಿಟ್ಟುಕೊಂಡು ರಾಜ್ಯಕ್ಕೆ ಬರುತ್ತಿದ್ದಾರೆ," ಎಂದು ಉತ್ತರಕನ್ನಡ ಸಂಸದರನ್ನು ಪರೋಕ್ಷವಾಗಿ ಟೀಕಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ
ಮಲ್ಲಿಕಾರ್ಜುನ ಖರ್ಗೆ ಹಠಾವೋ ಪ್ರಿಯಾಂಕಾ ಗಾಂಧಿ ಲಾವೋ, ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೆ ಹೋರಾಟ