ದೇವೇಗೌಡರ ಮನೆಯ ಗೇಟ್ ಬದಲಾಯಿಸಲು ನಿರ್ಧಾರ

Published : Apr 03, 2018, 12:06 PM ISTUpdated : Apr 14, 2018, 01:13 PM IST
ದೇವೇಗೌಡರ ಮನೆಯ ಗೇಟ್ ಬದಲಾಯಿಸಲು ನಿರ್ಧಾರ

ಸಾರಾಂಶ

ಮಾಜಿ ಪ್ರಧಾನಿ ಎಚ್’ಡಿ ದೇವೇಗೌಡರ ಮನೆಯ ಗೇಟ್ ಬದಲಾಯಿಸಲಾಗುತ್ತಿದ್ದು, ವಾಸ್ತು ಶಾಸ್ತ್ರಜ್ಞರ ಸಲಹೆ ಇದಕ್ಕೆ ಕಾರಣವಂತೆ. 

ಬೆಂಗಳೂರು : ಮಾಜಿ ಪ್ರಧಾನಿ ಎಚ್’ಡಿ ದೇವೇಗೌಡರ ಮನೆಯ ಗೇಟ್ ಬದಲಾಯಿಸಲಾಗುತ್ತಿದ್ದು, ವಾಸ್ತು ಶಾಸ್ತ್ರಜ್ಞರ ಸಲಹೆ ಇದಕ್ಕೆ ಕಾರಣವಂತೆ. ದೇವೇಗೌಡರ ಪುತ್ರ ರೇವಣ್ಣ ದಿಲ್ಲಿಗೆ ಬಂದಾಗೊಮ್ಮೆ ಮನೆ ಬಾಗಿಲಿನ ಎದುರು ಗೇಟ್ ಇರೋದು ನಮಗೆ ಒಳ್ಳೇದಲ್ಲ.  ಅದನ್ನು ಸ್ವಲ್ಪ ಎಡ ಮೂಲೆಗೆ ಶಿಫ್ಟ್ ಮಾಡಬೇಕು ಎಂದು ತಂದೆಗೆ ಹೇಳುತ್ತಲೇ ಇದ್ದರಂತೆ.

ಆದರೆ ಈಗ ಚುನಾವಣೆ ಇರುವುದರಿಂದ ಗೇಟ್ ಮಾಡಿಸುತ್ತಿರುವ ದೇವೇಗೌಡರು ತಮ್ಮ ಮನೆಯ ದೊಡ್ಡ ಗೇಟ್ ಅನ್ನು ಬಲ ಮೂಲೆಯಿಂದ ಎಡ ಮೂಲೆಗೆ ಶಿಫ್ಟ್ ಮಾಡಿದ್ದಾರೆ.

ರೇವಣ್ಣ ಗೇಟ್ ಶಿಫ್ಟ್ ಮಾಡಿದರೆ ದೆಹಲಿಯಲ್ಲಿ ಮತ್ತೆ ಪವರ್ ಫುಲ್ ಆಗ್ತೇವೆ ಎಂದು ತಂದೆಗೆ ಹೇಳಿದ್ದಾರಂತೆ. ಆದರೆ ದೆಹಲಿಯಲ್ಲಿ ಪ್ರಭಾವ ಬೆಳೆಯಬೇಕಾದರೆ ಕರ್ನಾಟಕದ ಅಧಿಕಾರದಲ್ಲಿ ಪಾಲು ಸಿಗಲೇಬೇಕು.

ಹೀಗಾಗಿ ಚುನಾವಣೆಗೆ ಮೊದಲೇ ಗೇಟ್ ಶಿಫ್ಟ್ ಆಗಿ ತಯಾರಾಗಬೇಕು ಎಂದು ದೇವೇಗೌಡರು ಹೇಳಿ ಹೋಗಿದ್ದಾರೆ. ಅಧಿಕಾರ ಕೂಡ ಮನೆಯ ಗೇಟ್ ಯಾವ ಮೂಲೆಯಲ್ಲಿ ಇದೆ ಎಂದು ನೋಡಿಕೊಂಡೇ ಬರುತ್ತದೆ ಎಂದು ನಂಬುವವರಿಗೆ ಬೇಡ ಎನ್ನಲಾದೀತೇ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!