ಜೆಡಿಎಸ್ ವರಿಷ್ಠರ ಕುಟುಂಬ ವಿಷ ನೀಡುವ ಕೆಲಸ ಮಾಡಿತು: ಶಾಸಕ

Published : Oct 14, 2017, 05:26 PM ISTUpdated : Apr 11, 2018, 12:42 PM IST
ಜೆಡಿಎಸ್ ವರಿಷ್ಠರ ಕುಟುಂಬ ವಿಷ ನೀಡುವ ಕೆಲಸ ಮಾಡಿತು: ಶಾಸಕ

ಸಾರಾಂಶ

ನಾವು ತಾಯಿಯನ್ನು ನಂಬಿಕೊಂಡು ರಾಜಕಾರಣ ಮಾಡುತ್ತಿದ್ದೇವೆ. ತಾಯಿಯೆಂದು ನಂಬಿದ್ದ ಕುಟುಂಬವೇ ನಮಗೆ ವಿಷ ನೀಡುವ ಕೆಲಸ ಮಾಡಿತು ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ. ಬಾಲಕೃಷ್ಣ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ರಾಮನಗರ: ನಾವು ತಾಯಿಯನ್ನು ನಂಬಿಕೊಂಡು ರಾಜಕಾರಣ ಮಾಡುತ್ತಿದ್ದೇವೆ. ತಾಯಿಯೆಂದು ನಂಬಿದ್ದ ಕುಟುಂಬವೇ ನಮಗೆ ವಿಷ ನೀಡುವ ಕೆಲಸ ಮಾಡಿತು ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ. ಬಾಲಕೃಷ್ಣ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ತಾಲೂಕಿನ ಬಿಡದಿಯಲ್ಲಿನ ನಲ್ಲಿಗುಡ್ಡ ಕೆರೆಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಯಿನೇ ವಿಷ ಹಾಕಿದರೆ ಮಕ್ಕಳು ಆ ಕುಟುಂಬದಲ್ಲಿ ಉಳಿಯಲು ಸಾಧ್ಯವೇ. ಆದ್ದರಿಂದಲೇ ನಾವೆಲ್ಲರೂ ಜೆಡಿಎಸ್ ತೊರೆವ ನಿರ್ಧಾರ ಮಾಡಿದೆವು ಹೇಳಿದರು.

ಮನಸ್ತಾಪ: ನನ್ನ ಮತ್ತು ಕುಮಾರ ಸ್ವಾಮಿ ಅವರ ನಡುವೆಕೆಲ ವಿಚಾರವಾಗಿ ಮನಸ್ತಾಪಗಳಿದ್ದವು. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನನ್ನ ಸಹೋದರ ಎಚ್. ಎನ್. ಅಶೋಕ್ ಅವರನ್ನು ಸೋಲಿಸಲು ಪ್ರಯತ್ನಿಸಿದರು. ಇದು ನಮ್ಮ ಮತ್ತು ಅವರ ನಡುವೆ ಬಿರುಕು ಹೆಚ್ಚಲು ಕಾರಣವಾಯಿತು.

ಕುಮಾರಸ್ವಾಮಿ ಒಡೆತನದ ದೃಶ್ಯ ಮಾಧ್ಯಮ ದಲ್ಲಿ ನನ್ನ ತೇಜೋವಧೆಗೆ ಪ್ರಯತ್ನಿಸಿದರು. ಜೆಡಿಎಸ್’ನ ನಿಷ್ಠಾವಂತ ಕಾರ್ಯಕರ್ತನ ರಕ್ಷಣೆಗೆ ಪೊಲೀಸ್ ಠಾಣೆಗೆ ತೆರಳಿದ್ದ ಸಂದರ್ಭದಲ್ಲಿ ನನ್ನನ್ನು ’ರೌಡಿ ಎಂಎಲ್‌ಎ’ ಎಂದು ಬಣ್ಣಿಸಿದರು. ಜಿಪಂ ಚುನಾವಣೆಯಲ್ಲಿ ಅಶೋಕ್ ಅವರನ್ನು ಸೋಲಿಸಲು ಕುಮಾರ ಸ್ವಾಮಿ ಹುನ್ನಾರ ನಡೆಸಿದ್ದನ್ನು ಜೆಡಿಎಸ್ ಮುಖಂಡರಾದ ವಕೀಲ ಸುಬ್ಬಶಾಸ್ತ್ರಿಗಳೇ ನನ್ನಲ್ಲಿ ಹೇಳಿದ್ದರು. ನಮ್ಮ ಮೇಲೆ ವಿಶ್ವಾಸವೇ ಇಲ್ಲದಿದ್ದರೆ ಅಲ್ಲಿ ಉಳಿಯಲು ಹೇಗೆ ಸಾಧ್ಯ. ಜೆಡಿಎಸ್‌ನಲ್ಲಿ ಉಳಿದರೆ ಮನಸ್ತಾಪಗಳು ಹೆಚ್ಚಾಗುತ್ತವೆ. ನನ್ನಿಂದ ಅವರಿಗೆ ಅಷ್ಟೊಂದು ಬೇಸರವಾ ಗಿದ್ದರೆ ಪಕ್ಷದಲ್ಲಿ ಉಳಿಯುವುದೇ ಬೇಡ ಎಂಬ ನಿರ್ಧಾರಕ್ಕೆ ಬಂದೆವು. ಅದರಂತೆ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದರು.

ಜೆಡಿಎಸ್ ವರಿಷ್ಠರ ಪಂಚಾಂಗ ಶಾಸಕ ಜಮೀರ್‌ಅವರ ಬಳಿ ಇರಬೇಕು. ನಮಗ್ಯಾರಿಗೂ ಅದನ್ನು ನೀಡದೆ ಗೌಪ್ಯವಾಗಿ ಇಟ್ಟುಕೊಂಡಿದ್ದಾರೆ. ಆ ಪಂಚಾಂಗದಲ್ಲಿ ಏನಿದೆ ಎಂಬ ಕುತೂಹಲ ನಮಗೂ ಇದೆ ಎಂದು ಬಾಲಕೃಷ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತತ್ವ ಸಿದ್ಧಾಂತಗಳೆಲ್ಲವೂ ಬುರುಡೆ: ರಾಜಕಾರಣದಲ್ಲಿ ತತ್ವ ಸಿದ್ಧಾಂತ ಎಂಬುದೆಲ್ಲ ಬುರುಡೆ. ಜಾತಿವಾದಿ ಮತ್ತು ಜಾತ್ಯತೀತವಾದಿಗಳು ಎನ್ನುವುದೂ ಸುಳ್ಳು. ಎಲ್ಲರೂ ಅವಕಾಶಕ್ಕೆ ತಕ್ಕಂತೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ತತ್ವ ಸಿದ್ಧಾಂತ ಎಂಬುದು ರಾಜಕಾರಣಿಗಳು ಜನರನ್ನು ಒಪ್ಪಿಸಲು ಬಿಡುವ ಬುರುಡೆ. ನನಗೆ ಅದರೆಲ್ಲೆಲ್ಲ ನಂಬಿಕೆ ಇಲ್ಲ. ಜನರ ಸೇವೆ ಮಾಡುವುದು ಮುಖ್ಯ. ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ನಾನು ಆಕಾಂಕ್ಷಿ. ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೊ ಅವರ ಪರ ದುಡಿಯಲು ಬದ್ಧ ಎಂದು ಹೇಳಿದರು.

ಚನ್ನಪಟ್ಟಣ ಕ್ಷೇತ್ರ ಶಾಸಕ ಸಿ.ಪಿ. ಯೋಗೇಶ್ವರ್ ಸ್ನೇಹಿತರು. ನಮ್ಮ ಮತ್ತು ಅವರ ಅಭಿಪ್ರಾಯಗಳು ಭಿನ್ನವಾಗಿವೆ. ಯಾವ ಪಕ್ಷಕ್ಕೆಸೇರಬೇಕು ಎಂಬ ಗೊಂದಲದಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ಯೋಗೇಶ್ವರ್ ಸೀನಿಯರ್ ರಾಜಕಾರಣಿ. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದು ಬಿಡುವುದ ಪಕ್ಷದ ವರಿಷ್ಠರಿಗೆ ಸಂಬಂಧಿಸಿದ ವಿಚಾರ ಎಂದು ತಿಳಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಳಿ ಕಟ್ಟುವ ಶುಭ ವೇಳೆ..., 'ಇವನು ನನ್ನ ಗಂಡ' ಎಂದವಳೊಂದಿಗೆ ಸಂಸಾರ ನಡೆಸುತ್ತೇನೆ ಎಂದ ಮದುಮಗ!
ಬೆಂಗಳೂರು ಜನತೆಗೆ ಶೀಘ್ರವೇ ದೊಡ್ಡ ಮುಕ್ತಿ, ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಮುಂದಿನ ತಿಂಗಳೊಳಗೆ ಸಂಚಾರ ಮುಕ್ತ!