10 ವರ್ಷಗಳ ನಂತರ ಮತ್ತೆ ಒಂದಾದ ಅಣ್ಣ ತಂಗಿ – ಹಾಸನದಲ್ಲೊಂದು ಸಿನಿಮೀಯ ಘಟನೆ

Published : Jan 17, 2018, 02:06 PM ISTUpdated : Apr 11, 2018, 12:43 PM IST
10 ವರ್ಷಗಳ ನಂತರ ಮತ್ತೆ ಒಂದಾದ ಅಣ್ಣ ತಂಗಿ – ಹಾಸನದಲ್ಲೊಂದು ಸಿನಿಮೀಯ ಘಟನೆ

ಸಾರಾಂಶ

ಅವರಿಬ್ಬರು ಅಣ್ಣ ತಂಗಿ. ಹುಟ್ಟಿದ ಒಂದೆರಡು ವರ್ಷಗಳಲ್ಲಿ ಹೆತ್ತವರನ್ನು ಕಳೆದುಕೊಂಡರು. ಚಿಕ್ಕಮ್ಮನ ಬಳಿ ಇದ್ದ ಅವರನ್ನು ಆಕೆಯೂ ಕೂಡ ತ್ಯಜಿಸಿದಳು. ಅಣ್ಣ ಯಾರದೋ ಮನೆ ಸೇರಿದ . ತಂಗಿ ಇನ್ಯಾರದೊ ಮನೆ ಸೇರಿದಳು. ಆದರೆ ಬರೋಬ್ಬರಿ 10 ವರ್ಷಗಳ ನಂತರ ಒಬ್ಬರನ್ನೊಬ್ಬರು ಗುರುತಿಸಿಕೊಂಡು ಅಣ್ಣ ತಂಗಿಯಾಗಿ ಒಪ್ಪಿ - ಅಪ್ಪಿಕೊಂಡಿದ್ದಾರೆ. ಇದು ಹಾಸನದಲ್ಲಿ ನಡೆದಿರೋ ಅಪರೂಪದ ಘಟನೆಯಾಗಿದೆ.

ಬೆಂಗಳೂರು (ಜ.17): ಅವರಿಬ್ಬರು ಅಣ್ಣ ತಂಗಿ. ಹುಟ್ಟಿದ ಒಂದೆರಡು ವರ್ಷಗಳಲ್ಲಿ ಹೆತ್ತವರನ್ನು ಕಳೆದುಕೊಂಡರು. ಚಿಕ್ಕಮ್ಮನ ಬಳಿ ಇದ್ದ ಅವರನ್ನು ಆಕೆಯೂ ಕೂಡ ತ್ಯಜಿಸಿದಳು. ಅಣ್ಣ ಯಾರದೋ ಮನೆ ಸೇರಿದ . ತಂಗಿ ಇನ್ಯಾರದೊ ಮನೆ ಸೇರಿದಳು. ಆದರೆ ಬರೋಬ್ಬರಿ 10 ವರ್ಷಗಳ ನಂತರ ಒಬ್ಬರನ್ನೊಬ್ಬರು ಗುರುತಿಸಿಕೊಂಡು ಅಣ್ಣ ತಂಗಿಯಾಗಿ ಒಪ್ಪಿ - ಅಪ್ಪಿಕೊಂಡಿದ್ದಾರೆ. ಇದು ಹಾಸನದಲ್ಲಿ ನಡೆದಿರೋ ಅಪರೂಪದ ಘಟನೆಯಾಗಿದೆ.

ಹಾಸನ ಜಿಲ್ಲೆ ಹೊಳೆನರಸೀಪುರದ ಮಳಲಿ ಗ್ರಾಮದಲ್ಲಿ ಹುಟ್ಟಿ ಹೆತ್ತವರನ್ನು ಕಳೆದುಕೊಂಡು, ಬಂಧುಗಳಿಂದ ದೂರಾಗಿದ್ದ ಮಂಜುನಾಥ್ – ಭಾಗ್ಯ ಎಂಬ  ಅಣ್ಣ ತಂಗಿ ಮತ್ತೆ ಒಂದಾಗಿದ್ದಾರೆ. ಅಣ್ಣಗೆ 16 ವರ್ಷ, ತಂಗಿಗೆ 13 ವರ್ಷವಾಗಿದೆ.  ಹಾಸನದ ಮಕ್ಕಳ ಕಲ್ಯಾಣ ಸಮಿತಿ ಇವರಿಬ್ಬರು ಅಣ್ಣ ತಂಗಿಯರನ್ನು ಒಂದಾಗಿಸುವ ಕೆಲಸ ಮಾಡಿದೆ.

ಚಿಕ್ಕಮ್ಮನ ಮನೆ ತೊರೆದ ಬಳಿಕ ಅಣ್ಣ ಮಂಜುನಾಥ ಮಳಲಿ ಗೌಡೇಗೌಡರ ಮನೆ ಸೇರಿದ್ದ. ಅವರ ಮನೆಯ ಮಗನಂತೆಯೆ ಬೆಳೆದು ಎಸ್ಎಸ್ ಎಲ್’ಸಿ ವ್ಯಾಸಂಗ ಮಾಡುತ್ತಿದ್ದಾನೆ. ಇತ್ತ ತಂಗಿ ಭಾಗ್ಯ ಸಕಲೇಶಪುರದ ಕಾಫಿ ತೋಟದ ಮಾಲೀಕರ ಮನೆಯನ್ನು ಸೇರಿದ್ದಳು. ಶ್ರೀಮಂತರ ಮನೆಯಲ್ಲಿದ್ದರೂ ಕೂಡ ಜೀತದಾಳುವಿನಂತೆ ದುಡಿಯುತ್ತಿದ್ದ ಭಾಗ್ಯ ಚಿಕ್ಕವಯಸ್ಸಿನಲ್ಲಿ ಹೆಚ್ಚು ಕಷ್ಟಪಟ್ಟಿದ್ದಳು.

ಆದರೆ ಅವರ ಮನೆಯನ್ನು ತೊರೆದು ಬಂದು ಮಕ್ಕಳ ರಕ್ಷಣಾ ಸಮಿತಿಯನ್ನು ಸೇರಿದ್ದಳು. ಬಳಿಕ ಆಕೆಯ ಅಣ್ಣನನ್ನು ಪತ್ತೆ ಹಚ್ಚಿ ಇಬ್ಬರನ್ನು ಸೇರಿಸಲಾಗಿದೆ. ಈ ಘಟನೆ ಎಲ್ಲರಿಗೂ ಸಿನಿಮೀಯ ರೀತಿಯಲ್ಲಿ ಗೋಚರವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಹೂದಿಗಳ 'ಬೆಳಕಿನ ಹಬ್ಬ'ದಂದೇ ಭಯೋತ್ಪಾದಕ ದಾಳಿ! ಹನುಕ್ಕಾ ಫೆಸ್ಟಿವಲ್ ಮಹತ್ವ, ಇತಿಹಾಸ ತಿಳಿಯಿರಿ
ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ, ವಿವಿಐಪಿಗೆ ಐದು ಹೆಲಿಪ್ಯಾಡ್ ವ್ಯವಸ್ಥೆ!