
ನವದೆಹಲಿ(ನ.29): ಪಂಜಾಬ್ನ ಬಿಗಿ ಭದ್ರತೆಯ ನಭಾ ಕಾರಾಗೃಹದಲ್ಲಿದ್ದ ವೇಳೆ ಖಲಿಸ್ತಾನ ವಿಮೋಚನಾ ಪಡೆ(ಕೆಎಲ್ಎಫ್)ಯ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ಪಾಕಿಸ್ತಾನದಲ್ಲಿರುವ ಕೆಲ ವ್ಯಕ್ತಿಗಳಿಗೆ ಹಲವು ಬಾರಿ ಕರೆ ಮಾಡಿದ್ದ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ಖಲಿಸ್ತಾನ ಚಳವಳಿಗೆ ಸಹಾಯ ಕೋರುವ ಮತ್ತು ಕೆಲ ಪಾಕಿಸ್ತಾನ ಗೂಡಾಚರ್ಯೆ ಸಂಸ್ಥೆ ಐಎಸ್ಐ ನಿರ್ವಾಹಕರಿಗೆ ಮಿಂಟೂ ಕರೆ ಮಾಡಿ ಸಮಾಲೋಚನೆ ನಡೆಸಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಕೆಎಲ್ಎಫ್ ಉಗ್ರ ಮಿಂಟೂನನ್ನು ಜಂಟಿ ತನಿಖೆಗೆ ಒಳಪಡಿಸಲಾಗಿದೆ.
ಭಾನುವಾರ ಬೆಳಗ್ಗೆ ಕಾರಾಗೃಹದಿಂದ ಇತರೆ 6 ಮಂದಿ ಕೈದಿಗಳ ಜತೆ ತಪ್ಪಿಸಿಕೊಂಡಿದ್ದ ಮಿಂಟೂನನ್ನು ದೆಹಲಿಯಲ್ಲಿ ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.