ಸಚಿವರಿಗಾಗಿ ಟ್ರಾಫಿಕ್ ತಡೆಯುವುದು, ವಿಮಾನ ವಿಳಂಬ ಮಾಡುವುದು ಸರಿ: ಕೇಂದ್ರ ಸಚಿವೆ

Published : Mar 20, 2017, 10:22 AM ISTUpdated : Apr 11, 2018, 01:12 PM IST
ಸಚಿವರಿಗಾಗಿ ಟ್ರಾಫಿಕ್ ತಡೆಯುವುದು, ವಿಮಾನ ವಿಳಂಬ ಮಾಡುವುದು ಸರಿ: ಕೇಂದ್ರ ಸಚಿವೆ

ಸಾರಾಂಶ

ಸಚಿವರ ವಾಹನಗಳ ಮೇಲೆ ಕೆಂಪು ದೀಪ ಹಾಕುವುದು ಹಾಗೂ ಅವರಿಗಾಗಿ ಟ್ರಾಫಿಕನ್ನು ನಿಲ್ಲಿಸುವುದು ಸರಿಯಾಗಿಯೇ ಇದೆ.  ಸಚಿವರು ಮುಖ್ಯವಾದ ಸಭೆಗಳಿಗೆ ಹೋಗಬೇಕಾಗಿರುವುದರಿಂದ ಅವರಿಗಾಗಿ ವಿಮಾನ ಹಾರಾಟವನ್ನು ವಿಳಂಬ ಮಾಡುವುದು ಕೂಡಾ ತಪ್ಪಲ್ಲವೆಂದು ಉಮಾ ಭಾರತಿ ಹೇಳಿದ್ದಾರೆ.

ಭೋಪಾಲ್ (ಮಾ.20): ಪಂಜಾಬಿನಲ್ಲಿ ಅಧಿಕಾರಕ್ಕೆ ಬಂದಿರುವ ನೂತನ ಕಾಂಗ್ರೆಸ್ ಸರ್ಕಾರ ರಾಜಕಾರಣಿಗಳ ವಿವಿಐಪಿ ಸಂಸ್ಕೃತಿಗೆ ತಿಲಾಂಜಲಿ ಇಡಲು ನಿರ್ಧರಿಸಿರುವುದನ್ನು ಕೇಂದ್ರ ಸಚಿವೆ ಉಮಾ ಭಾರತಿ ಆಕ್ಷೇಪಿಸಿದ್ದಾರೆ.

ಸಚಿವರಿಗಾಗಿ ವಾಹನ ಸಂಚಾರವನ್ನು ತಡೆಹಿಡಿಯುವುದು ಹಾಗೂ ವಿಮಾನವನ್ನು ವಿಳಂಬಗೊಳಿಸುವುದರಲ್ಲಿ ಯಾವುದೇ ಸಮಸ್ಯೆಯಿಲ್ಲವೆಂದು ಉಮಾ ಭಾರತಿ ಹೇಳಿದ್ದಾರೆ.

ಸಚಿವರ ವಾಹನಗಳ ಮೇಲೆ ಕೆಂಪು ದೀಪ ಹಾಕುವುದು ಹಾಗೂ ಅವರಿಗಾಗಿ ಟ್ರಾಫಿಕನ್ನು ನಿಲ್ಲಿಸುವುದು ಸರಿಯಾಗಿಯೇ ಇದೆ. ಸಚಿವರು ಮುಖ್ಯವಾದ ಸಭೆಗಳಿಗೆ ಹೋಗಬೇಕಾಗಿರುವುದರಿಂದ ಅವರಿಗಾಗಿ ವಿಮಾನ ಹಾರಾಟವನ್ನು ವಿಳಂಬ ಮಾಡುವುದು ಕೂಡಾ ತಪ್ಪಲ್ಲ, ಇಲ್ಲದಿದ್ದರೆ ಕೋಟ್ಯಾಂತರ ರೂ. ನಷ್ಟವಾಗು ಸಾಧ್ಯತೆಗಳಿರುತ್ತದೆ ಎಂದು ಉಮಾ ಭಾರತಿ ಹೇಳಿದ್ದಾರೆ.

ಆದರೆ ವೈಯುಕ್ತಿಕ ಕೆಲಸಗಳಿಗೆ ಅವರು ಹೋಗುವುದಾದರೆ ಆ ಸೌಲಭ್ಯಗಳನ್ನು ಅವರಿಗೆ ನೀಡಬೇಕೆಂದಿಲ್ಲವೆಂದು ಅವರು ಹೇಳಿದ್ದಾರೆ.

ಸರ್ಕಾರಿ ವಾಹನಗಳ ಮೇಲಿನಿಂದ ಕೆಂಪು, ಹಳದಿ ಹಾಗೂ ನೀಲಿ ದೀಪಗಳನ್ನು ತೆಗೆಯುವ ಮೂಲಕ ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಲು ಪಂಜಾಬಿನ ನೂತನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಚಿವ ಸಂಪುಟವು ನಿರ್ಧರಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು