
ಬೆಂಗಳೂರು(ಡಿ.27): ಮಹದಾಯಿ ಬಗ್ಗೆ ರಾಜಭವನದಲ್ಲೂ ರಾಜಕೀಯ ನಡೆಯಿತೆ ? ಮಹದಾಯಿ ಹೋರಾಟಗಾರ ಭೇಟಿಗೆ ರಾಜ್ಯಪಾಲ ವಜುಬಾಯಿ ವಾಲಾ ನಿರಾಕರಿಸಿರುವ ಬಗ್ಗೆ ಹೋರಾಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರ ಭೇಟಿಗೆ ಹೋರಾಟಗಾರರು ಕಾದು ಕುಳಿತರೂ ರೈತರ ಮನವಿ ಸ್ವೀಕರಿಸಲೂ ಅವರು ಮುಂದಾಗಲಿಲ್ಲ. ರಾಜ್ಯದ ನೆಲ, ಜಲ ವಿಚಾರದಲ್ಲಿ ರಾಜ್ಯಪಾಲರ ದಿವ್ಯಮೌನ ವಹಿಸಿದರು. ರಾಜಭವನ ಒಳಪ್ರವೇಶಿಸಿದರೂ ರಾಜ್ಯಪಾಲರ ಭೇಟಿಗೆ ಅವಕಾಶ ಸಿಗಲಿಲ್ಲ. ರಾಜ್ಯಪಾಲರ ಖುದ್ದು ಭೇಟಿಗೆ ರೈತರೆಲ್ಲ ಪಟ್ಟು ಹಿಡಿದಿದ್ದರು.ಅನಂತರ ರಾಜ್ಯಪಾಲರ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ಹೋರಾಟಗಾರರು ವಾಪಸಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.