
ನವದೆಹಲಿ(ಎ.22): ದೀರ್ಘ ಸಮಯದಿಂದ ಯಾವುದೇ ವ್ಯಾಪಾರ ವಹಿವಾಟ ನಡೆಸದ ಕಂಪೆನಿಗಳ ನೋಂದಣಿ ರದ್ದು ಮಾಡಿ ಶಾಕ್ ನೀಡಲು ಸರ್ಕಾರ ಮುಂದಾಗಿದೆ. ಕಪ್ಪು ಹಣವನ್ನು ತಡಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸುವ ಕ್ರಮಗಳಲ್ಲಿ ಇದು ಕೂಡಾ ಒಂದಂತೆ.
ಯಾವುದೇ ವ್ಯಾಪಾರ ವಹಿವಾಟು ನಡೆಸದ ವಿಭಿನ್ನ ರಾಜ್ಯಗಳ ಎರಡು ಲಕ್ಷಕ್ಕೂ ಅಧಿಕ ಕಂಪೆನಿಗಳಿಗೆ ಕಾರಣ ತಿಳಿಸುವಂತೆ ಸೂಚಿಸಿ ಈಗಾಗಲೇ ನೋಟೀಸ್'ಗಳನ್ನು ಸರ್ಕಾರ ರವಾನಿಸಿದೆಯಂತೆ. ಕೇವಲ ಹೆಸರಿಗೆ ಕಂಪೆನಿ ಎಂದು ಹೇಳಿಕೊಂಡು, ಯಾವುದೇ ವಹಿವಾಟು ನಡೆಸದೆ ಮನಿ ಲ್ಯಾಂಡ್ರಿಂಗ್'ಗಾಗಿಯೇ ಬಳಸಲಾಗುತ್ತಿರುವ ಕಂಪೆನಿಗಳನ್ನು ಮಟ್ಟ ಹಾಕಲು ಈ ಯೋಜನೆ ಜಾರಿಗೊಳಿಸಲಾಗಿಉತ್ತಿದೆ ಎಂದು ತಿಳಿದು ಬಂದಿದೆ.
ನೋಟೀಸ್ ಪಡೆದವರು ತಮ್ಮ ಕಂಪೆನಿಯ ಅಸ್ಥಿತ್ವ ಉಳಿಸಿಕೊಳ್ಳಲು ಸೂಕ್ತ ಕಾರಣವನ್ನು ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಇವರು ನೀಡದ ಕಾರಣ ತೃಪ್ತಿಕರವಾಗಿಲ್ಲವೆಂದಾದರೆ ಸಚಿವಾಲಯ ನೋಂದಣಿಯನ್ನು ರದ್ದು ಮಾಡುವಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು ಲಭ್ಯವಾದ ಮಾಹಿತಿಯನ್ವಯ ಮುಂಬಯಿಯ 71,000 ಹಾಗೂ ದೆಹಲಿಯ 53,000ಕ್ಕೂ ಅಧಿಕ ಕಂಪಡನಿಗಳಿಗೆ ಸರ್ಕಾರ ಈ ನೋಟೀಸ್ ನೀಡಿದೆ ಎಂದು ತಿಳಿದು ಬಂದಿದೆ.
ಕೃಪೆ: NDTv
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.