ಸರ್ಕಾರಿ ಶಾಲಾ ಹುಡಗನಿಗೆ ಗೂಗಲ್ ನೌಕರಿ; ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತಿರಾ!

Published : Aug 01, 2017, 04:54 PM ISTUpdated : Apr 11, 2018, 12:35 PM IST
ಸರ್ಕಾರಿ ಶಾಲಾ ಹುಡಗನಿಗೆ ಗೂಗಲ್ ನೌಕರಿ; ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತಿರಾ!

ಸಾರಾಂಶ

ಚಂಡಿಗಢದ ಸರ್ಕಾರಿ ಶಾಲಾ ವಿದ್ಯಾರ್ಥಿಯೊಬ್ಬನನ್ನು ಸಾಫ್ಟ್’ವೇರ್ ದೈತ್ಯ ಗೂಗಲ್ ನೇಮಿಸಿಕೊಂಡಿದೆಯೆಂದು  ವರದಿಯಾಗಿದೆ.  16 ವರ್ಷ ಪ್ರಾಯದ ಹರ್ಶಿತ್ ಶರ್ಮಾ ಈ ತಿಂಗಳಾಂತ್ಯದಲ್ಲಿ ಗೂಗಲ್’ನ ಗ್ರಾಫಿಕ್ಸ್ ಡಿಸೈನ್ ತಂಡವನ್ನು ಸೇರಿಕೊಳ್ಳಿಲಿದ್ದಾರೆಂದು ಹೇಳಲಾಗಿದೆ.

ನವದೆಹಲಿ: ಚಂಡಿಗಢದ ಸರ್ಕಾರಿ ಶಾಲಾ ವಿದ್ಯಾರ್ಥಿಯೊಬ್ಬನನ್ನು ಸಾಫ್ಟ್’ವೇರ್ ದೈತ್ಯ ಗೂಗಲ್ ನೇಮಿಸಿಕೊಂಡಿದೆಯೆಂದು  ವರದಿಯಾಗಿದೆ.  16 ವರ್ಷ ಪ್ರಾಯದ ಹರ್ಶಿತ್ ಶರ್ಮಾ ಈ ತಿಂಗಳಾಂತ್ಯದಲ್ಲಿ ಗೂಗಲ್’ನ ಗ್ರಾಫಿಕ್ಸ್ ಡಿಸೈನ್ ತಂಡವನ್ನು ಸೇರಿಕೊಳ್ಳಿಲಿದ್ದಾರೆಂದು ಹೇಳಲಾಗಿದೆ.

ಚಂಡಿಗಢದ ಸೆಕ್ಟರ್ 33ರಲ್ಲಿರುವ ಸರ್ಕಾರಿ ಹಿರಿಯ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಹರ್ಶಿತ್ ಒಂದು ವರ್ಷ ಗೂಗಲ್’ನಲ್ಲಿ ತರಬೇತಿ ಪಡೆಯಲಿದ್ದಾನೆ. ಆ ಅವಧಿಯಲ್ಲಿ  ಆತನಿಗೆ ಪ್ರತಿ ತಿಂಗಳು ರೂ. 4 ಲಕ್ಷ ವಿದ್ಯಾರ್ಥಿವೇತನ ಸಿಗಲಿದೆ.  ತರಬೇತಿ ಮುಗಿದ ಬಳಿಕ ಪ್ರತಿ ತಿಂಗಳು ರೂ. 12 ಲಕ್ಷ (ವರ್ಷಕ್ಕೆ ರೂ. 1.44 ಕೋಟಿ) ಸಂಬಳ ಪಡೆಯಲಿದ್ದಾನೆಯೆಂದು ವರದಿಯಾಗಿದೆ.

ಆನ್’ಲೈನ್’ನಲ್ಲಿ ಉದ್ಯೋಗ ಹುಡುಕುತ್ತಿದ್ದೆ.  ಕಳೆದ ಮೇ ನಲ್ಲಿ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದೆ.  ಆನ್’ಲೈನ್ ಸಂದರ್ಶನ ನಡೆಯಿತು. ಕಳೆದ 10 ವರ್ಷಗಳಿಂದ ನಾನು ಗ್ರಾಫಿಕ್ಸ್ ವಿನ್ಯಾಸ ಕೆಲಸದಲ್ಲಿ ತೊಡಗಿದ್ದೇನೆ. ನಾನು ವಿನ್ಯಾಸಗೊಳಿಸಿದ ಪೋಸ್ಟರ್’ಗಳನ್ನು ನೋಡಿ ನನ್ನನ್ನು ಆಯ್ಕೆ ಮಾಡಲಾಗಿದೆ ಎಂದು ಹರ್ಶಿತ್ ಈ ಸಂದರ್ಭದಲ್ಲಿ ತಿಳಿಸಿದ್ದಾನೆ.

ಶಾಲಾ ಬಿಡುವಿನ ಸಮಯದಲ್ಲಿ ತಾನು ಹಾಲಿವುಡ್ ಹಾಗೂ ಬಾಲಿವುಡ್ ತಾರೆಯರಿಗಾಗಿ ಪೋಸ್ಟರ್ ವಿನ್ಯಾಸ ಮಾಡುತ್ತಿದ್ದೆ, ಹಾಗೂ ಪ್ರತಿ ಪೋಸ್ಟರ್’ಗೆ ಸುಮಾರು 40-50 ಸಾವಿರ ಹಣ ಸಂಪಾದಿಸುತ್ತಿದ್ದೆ ಎಂದು  ಸ್ಥಳೀಯ ಮಾಧ್ಯಮಗಳಿಗೆ ಹರ್ಶಿತ್ ತಿಳಿಸಿದ್ದಾನೆ.

ಹರ್ಯಾಣದ ಕುರುಕ್ಷೇತ್ರದಲ್ಲಿರುವ ಮಥಾನ ಗ್ರಾಮಕ್ಕೆ ಸೇರಿದ ಹರ್ಶಿತ್  11 ನೇ ತರಗತಿಯಲ್ಲಿ ಮಾಹಿತಿ ತಂತ್ರಜ್ಞಾನ ಕಲಿತಿದ್ದಾನೆ. ಆತನ ಹೆತ್ತವರು ಶಿಕ್ಷಕರಾಗಿದ್ದಾರೆ. ಪ್ರಧಾನಿ ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ಹರ್ಶಿತ್ ಈ ಹಿಂದೆ ರೂ.7000 ಬಹುಮಾನವನ್ನು ಪಡೆದಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ವಿರೋಧಿ ಬಾಂಗ್ಲಾದೇಶಿ ವಿದ್ಯಾರ್ಥಿ ಯುವ ನಾಯಕ ಉಸ್ಮಾನ್‌
ಅಯ್ಯಪ್ಪನ ಚಿನ್ನ ಎಗರಿಸಿದ ಕೇಸಲ್ಲಿ ಬಳ್ಳಾರಿ ವ್ಯಕ್ತಿ ಸೆರೆ