
ನವದೆಹಲಿ (ಜು.21): ಕಳೆದ ಎನ್ಡಿಎ ಸರಕಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಿ, ಕಾನೂನಾಗಿ ರೂಪಿಸಲು ಸಾಧ್ಯವಾಗದೇ ಇರುವ ತ್ರಿವಳಿ ತಲಾಖ್ ಸೇರಿ ಒಟ್ಟು 10 ಸುಗ್ರೀವಾಜ್ಞೆಗಳನ್ನು ಗುರುವಾರ ಸರಕಾರ ಮತ್ತೆ ಮಂಡಿಸಿದೆ. ಮಹಿಳೆಯರ ಮದುವೆ ಹಕ್ಕು ಮತ್ತು ರಕ್ಷಣೆ ಕಾಯ್ದೆ 2019 ಸೇರಿ ಉಳಿದ ಹೊಸ ಮಸೂದೆಗಳು ಇಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ.
ಸುಗ್ರೀವಾಜ್ಞೆ ಹೊರಡಿಸಿದ 45 ದಿನಗಳಲ್ಲಿ ಕಾಯ್ದೆ ಕಾನೂನಾಗಿ ಮಾರ್ಪಾಡಬೇಕು. ಆದರೆ, ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ಕಾರಣ ಭಾರತೀಯ ವೈದ್ಯಕೀಯ ಮಂಡಳಿ, ಕಂಪನಿಗಳ ಸುಗ್ರೀವಾಜ್ಞೆ, ಜಮ್ಮು-ಕಾಶ್ಮೀರ ಮೀಸಲಾತಿ, ಆಧಾರ್, ವಿಶೇಷ ಆರ್ಥಿಕ ವಲಯ, ಕೇಂದ್ರೀಯ ಶಿಕ್ಷಣ ಸಂಸ್ಥೆಗಳು ಸೇರಿ ಕೆಲವು ಮಸೂದೆಗಳು ಒಪ್ಪಿಗೆ ಪಡೆಯಲು ಸಾಧ್ಯವಾಗಿರಲಿಲ್ಲ.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್ ಕಾನೂನು ರದ್ದು
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತ್ರಿವಳಿ ತಲಾಖ್, ಆಧಾರ್ ಸೇರಿದಂತೆ 10 ಸುಗ್ರಿವಾಜ್ಞೆಗಳನ್ನು ಹೊಸ ಮಸೂದೆಗಳಾಗಿ ಮಂಡಿಸಿ ಸಂಸತ್ತಿನಲ್ಲಿ ಮಂಡಿಸಲು ಒಪ್ಪಿಗೆ ಪಡೆಯಲಾಗಿತ್ತು. ವಿಶೇಷವಾಗಿ ತ್ರಿವಳಿ ತಲಾಕ್ ಶಿಕ್ಷೆಯಾಗಬಲ್ಲ ಅಪಾರಧವೆನ್ನುವ ಮಸೂದೆ ಜಾರಿಗೊಳ್ಳಲಿದ್ದು, ಎಲ್ಲಿಯಾಯ್ತೋ ಅಲ್ಲಿ, ಹೇಗಾಯ್ತೋ ಅಲ್ಲಿ ವಿಚ್ಛೇದನ ನೀಡಬಹುದಾಗಿದ್ದ ಪದ್ಧತಿಗೆ ಇನ್ನು ಬ್ರೇಕ್ ಬೀಳಲಿದೆ.
ಕಲಾಪ ಆರಂಭವಾದ 45 ದಿನಗಳ ಒಳಗಾಗಿ ಈ ಎಲ್ಲ ಸುಗ್ರೀವಾಜ್ಞೆಗಳನ್ನು ಕಾನೂನಾಗಿ ರೂಪಿಸಬೇಕು. ಇಲ್ಲದಿದ್ದರೆ, ಈ ಎಲ್ಲ ಸುಗ್ರೀವಾಜ್ಞೆಗಳು ತಾವಾಗಿಯೇ ರದ್ದಾಗಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.