ಸತ್ತ ಮಗ ಬದುಕಿ ಬರುತ್ತಾನೆಂದು 38 ದಿನ ಸ್ಮಶಾನದಲ್ಲೇ ಕಳೆದ ತಂದೆ!

Published : Jan 28, 2019, 08:16 AM IST
ಸತ್ತ ಮಗ ಬದುಕಿ ಬರುತ್ತಾನೆಂದು 38 ದಿನ ಸ್ಮಶಾನದಲ್ಲೇ ಕಳೆದ ತಂದೆ!

ಸಾರಾಂಶ

ಸತ್ತ ಮಗ ಬದುಕಿ ಬರುತ್ತಾನೆಂದು 38 ದಿನ ಸ್ಮಶಾನದಲ್ಲೇ ಕಳೆದ ತಂದೆ!

ವಿಜಯವಾಡ[ಜ.28]: ಸಾವನ್ನಪ್ಪಿದ ಮಗ ಮತ್ತೆ ಮರಳಿ ಬದುಕಿ ಬರುತ್ತಾನೆ ಎಂಬ ಮಂತ್ರವಾದಿಯೊಬ್ಬನ ಮಾತು ನಂಬಿದ ವೃದ್ಧರೊಬ್ಬರು 38 ದಿನ ಸ್ಮಶಾನದಲ್ಲೇ ವಾಸವಿದ್ದ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ಅಲ್ಲದೆ, ಸತ್ತ ಮಗನನ್ನು ಬದುಕಿಸುತ್ತೇನೆ ಎಂದು ಮಂಕುಬೂದಿ ಎರಚಿ ಮಂತ್ರವಾದಿಯು ತುಪ್ಪಕುಲಾ ರಾಮು(56) ಅವರಿಂದ ಸುಮಾರು 7 ಲಕ್ಷ ರು. ಪೀಕಿದ್ದಾರೆ ಎಂಬ ಸಂಗತಿಯೂ ಇದೀಗ ಬಯಲಾಗಿದೆ.

ಹಂದಿ ಜ್ವರದ ಪರಿಣಾಮ ತುಪ್ಪಕುಲಾ ರಾಮು ಅವರ ಪುತ್ರ ಶ್ರೀನಿವಾಸುಲು(26) ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಕೆಲವರು ಶ್ರೀನಿವಾಸುಲು ಓರ್ವ ಹುಡುಗಿಯನ್ನು ಪ್ರೀತಿಸುತ್ತಿದ್ದ. ಹುಡುಗಿ ತಂದೆಯೇ ನಿಮ್ಮ ಮಗನ ಮೇಲೆ ಮಾಟ-ಮಂತ್ರ ಮಾಡಿಸಿರಬೇಕು ಎಂದು ಗ್ರಾಮಸ್ಥರು ರಾಮುವಿನ ತಲೆಗೆ ತುಂಬಿದರು. ಇದನ್ನು ನಂಬಿದ ರಾಮು ಅವರು, ಮಂತ್ರವಾದಿಯೊಬ್ಬರಿಗೆ ಮಗನ ಬದುಕಿಸಿಕೊಡುವಂತೆ ಕೋರಿ 7 ಲಕ್ಷ ರು. ನೀಡಿದ್ದರು. ಅಲ್ಲದೆ, ಅವರು ಹೇಳಿದಂತೆ 41 ದಿನಗಳ ಕಾಲ ಸ್ಮಶಾನದಲ್ಲೇ ನೆಲೆಸಲು ಮುಂದಾಗಿದ್ದರು.

ಆದರೆ, ಅಷ್ಟೊತ್ತಿಗಾಗಲೇ ಪೊಲೀಸರು ಈ ಘಟನೆಯನ್ನು ಭೇದಿಸಿದ್ದಾರೆ. ಆದಾಗ್ಯೂ, ಮಂತ್ರವಾದಿ ವಿರುದ್ಧ ಪ್ರಕರಣ ದಾಖಲಿಸಲು ರಾಮು ನಿರಾಕರಿಸಿದ್ದಾರೆ. ಹೀಗಾಗಿ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ