2016ರಲ್ಲಿ ರೈತರ ಆತ್ಮಹತ್ಯೆ: ಕರ್ನಾಟಕ ದೇಶದಲ್ಲೇ ನಂ.2!

Published : Mar 18, 2018, 09:17 AM ISTUpdated : Apr 11, 2018, 12:50 PM IST
2016ರಲ್ಲಿ ರೈತರ ಆತ್ಮಹತ್ಯೆ: ಕರ್ನಾಟಕ ದೇಶದಲ್ಲೇ ನಂ.2!

ಸಾರಾಂಶ

ರೈತರ ಆತ್ಮಹತ್ಯೆ ವಿಷಯವು ಈ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ವಿಷಯವಾಗಿ ಮಾರ್ಪಟ್ಟಿರುವ ನಡುವೆಯೇ ಈ ವಿಷಯಕ್ಕೆ ಸಂಬಂಧಿಸಿದ ಆಘಾತಕಾರಿ ಅಂಕಿ-ಅಂಶಗಳು ಬಯಲಾಗಿವೆ.

ನವದೆಹಲಿ : ರೈತರ ಆತ್ಮಹತ್ಯೆ ವಿಷಯವು ಈ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ವಿಷಯವಾಗಿ ಮಾರ್ಪಟ್ಟಿರುವ ನಡುವೆಯೇ ಈ ವಿಷಯಕ್ಕೆ ಸಂಬಂಧಿಸಿದ ಆಘಾತಕಾರಿ ಅಂಕಿ-ಅಂಶಗಳು ಬಯಲಾಗಿವೆ.

ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ 2016ರಲ್ಲಿ ಶೇ.32ರಷ್ಟುಏರಿಕೆಯಾಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕವು ದೇಶದಲ್ಲೇ 2ನೇ ಸ್ಥಾನ ಪಡೆದಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಶುಕ್ರವಾರ ಮಾಹಿತಿ ನೀಡಿದೆ.

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ವರದಿ ಆಧರಿಸಿ ಈ ಅಂಕಿ ಅಂಶ ನೀಡಿದ ಕೇಂದ್ರ ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌, 2016ರಲ್ಲಿ ಕರ್ನಾಟಕದಲ್ಲಿ 2079 ರೈತ ಆತ್ಮಹತ್ಯೆಗಳು ನಡೆದಿವೆ. ಇದರ ಪ್ರಮಾಣ 2015ರಲ್ಲಿ 1569 ಇತ್ತು ಎಂದು ತಿಳಿಸಿದ್ದಾರೆ. 2079ರ ಪೈಕಿ 861 ಜನ ಕೃಷಿ ಕಾರ್ಮಿಕರು. 1212 ರೈತರು ಎಂದು ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಆದರೆ ಒಟ್ಟಾರೆ ದೇಶದಲ್ಲಿ ರೈತರ ಆತ್ಮಹತ್ಯಾ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, 2016ರಲ್ಲಿ 11370 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2015ರಲ್ಲಿ ಇದರ ಪ್ರಮಾಣ 12602 ಆಗಿತ್ತು. ಒಟ್ಟಾರೆ ಶೇ.9.77ರಷ್ಟುಇಳಿದಂತಾಗಿದೆ ಎಂದು ಶಿವಸೇನಾ ಸದಸ್ಯ ಸಂಜಯ ರಾವುತ್‌ ಅವರ ಪ್ರಶ್ನೆಗೆ ರಾಧಾಮೋಹನ್‌ ಉತ್ತರಿಸಿದ್ದಾರೆ.

ಮಹಾರಾಷ್ಟ್ರ ನಂ.1: ಇದೇ ವೇಳೆ ರೈತರ ಆತ್ಮಹತ್ಯೆಯಲ್ಲಿ 2016ರಲ್ಲಿ ಮಹಾರಾಷ್ಟ್ರ ನಂ.1 ಸ್ಥಾನದಲ್ಲಿದ್ದು 3661 ಆತ್ಮಹತ್ಯೆಗಳು ನಡೆದಿವೆ. ಇದರಲ್ಲಿ 1111 ಕೃಷಿ ಕಾರ್ಮಿಕರು ಹಾಗೂ 2550 ರೈತರಿದ್ದಾರೆ. 2015ರಲ್ಲಿ ಇದರ ಪ್ರಮಾಣ 4291 ಆಗಿತ್ತು. 3ನೇ ಸ್ಥಾನದಲ್ಲಿ ಮಧ್ಯಪ್ರದೇಶ ಇದೆ. ಇಲ್ಲಿ 1321 ರೈತರು 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2015ರಲ್ಲಿ 1290 ರೈತರು ಆತ್ಮಹತ್ಯೆಗೆ ಶರಣಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ: ನೆಟ್ಟಿಗರಿಂದ ತೀವ್ರ ಆಕ್ರೋಶ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ