
ನವದೆಹಲಿ: ನ್ಯಾಯಾಧೀಶರು ವಸ್ತುನಿಷ್ಠರಾಗಿರಬೇಕು, ಯಾವುದೇ ಸಂದರ್ಭದಲ್ಲಿ ಪ್ರಕರಣದ ಸತ್ಯಾಂಶ ಆಧರಿಸಿಯೇ ತೀರ್ಪು ನೀಡಬೇಕೆಂಬ ನಿರೀಕ್ಷೆಯಿರುತ್ತದೆ. ಆದರೆ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳನ್ನು ಆಧರಿಸಿದ ತಯಾರಿಸಿದ ವರದಿ ಪ್ರಕಾರ, ನ್ಯಾಯಾಧೀಶರ ಧಾರ್ಮಿಕ, ವೈಯಕ್ತಿಕ ನಂಬಿಕೆಗಳೂ ತೀರ್ಪುಗಳ ಮೇಲೆ ಪರಿಣಾಮ ಬೀರುತ್ತವೆ. ಗಲ್ಲು, ಜೀವಾವಧಿ ಶಿಕ್ಷೆಗಳ ತೀರ್ಪು ನೀಡುವ ಸಂದರ್ಭಗಳಲ್ಲೂ ಇಂತಹ ಪ್ರಭಾವ ವಿರುತ್ತದೆ ಎಂದು ಹೇಳಲಾಗಿದೆ.
ದೆಹಲಿಯ ರಾಷ್ಟ್ರೀಯ ಕಾನೂನು ವಿವಿಯ ಮರಣ ದಂಡನೆಯ ಕೇಂದ್ರದ ವತಿಯಿಂದ ಸಿದ್ಧಪಡಿಸಲಾದ ‘ತೀರ್ಪಿನ ವಿಷಯಗಳು’ ಸಮೀಕ್ಷೆಯಲ್ಲಿ ಈ ಅಂಶಗಳು ಪತ್ತೆಯಾಗಿವೆ.
ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆಗಳ ನಡುವೆ ಯಾವ ಶಿಕ್ಷೆ ನೀಡಬೇಕೆಂಬ ಆಯ್ಕೆಯ ಪ್ರಶ್ನೆ ಬಂದಾಗ ಮತ್ತು ಮರಣ ದಂಡನೆ ವಿಧಿಸುವಾಗ ಪರಿಗಣಿಸಲಾದ ವಿವಿಧ ಆಧಾರಗಳನ್ನು ಗಮನಿಸಿದಾಗ ನ್ಯಾಯಮೂರ್ತಿಗಳ ಧರ್ಮ ಸೇರಿದಂತೆ, ಹಿನ್ನೆಲೆಯೂ ಪ್ರಭಾವ ಬೀರುತ್ತದೆ ಎಂಬುದು ಸಮೀಕ್ಷೆಯಿಂದ ತಿಳಿದು ಬರುತ್ತದೆ.
ಸುಮಾರು 60 ನಿವೃತ್ತ ನ್ಯಾಯಮೂರ್ತಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.