ಎಲ್ಲಾ ಹಿಂದೂಗಳೂ ಖಡ್ಗ ಹಿಡಿದು ಹೋರಾಡಿ : ತೆಲಂಗಾಣ ಶಾಸಕ

Published : Dec 16, 2017, 11:15 AM ISTUpdated : Apr 11, 2018, 12:41 PM IST
ಎಲ್ಲಾ ಹಿಂದೂಗಳೂ ಖಡ್ಗ ಹಿಡಿದು ಹೋರಾಡಿ : ತೆಲಂಗಾಣ ಶಾಸಕ

ಸಾರಾಂಶ

ಮುಂದಿನ ದಿನಗಳಲ್ಲಿ ಆತಂಕವಾದಿಗಳ ವಿರುದ್ಧ ಹೋರಾಡಲು ಹಿಂದೂಗಳು ಖಡ್ಗ ಹಿಡಿಯಬೇಕಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಹಿಂದೂವೂ ಕೈಯಲ್ಲಿ ಖಡ್ಗ ಹಿಡಿದು ಹೋರಾಟ ನಡೆಸಬೇಕು ಎಂದು ತೆಲಂಗಾಣದ ಶಾಸಕ ರಾಜಾಸಿಂಗ್ ಠಾಕೂರ್ ತಿಳಿಸಿದ್ದಾರೆ.

ಯಾದಗಿರಿ(ಡಿ.16): ಮುಂದಿನ ದಿನಗಳಲ್ಲಿ ಆತಂಕವಾದಿಗಳ ವಿರುದ್ಧ ಹೋರಾಡಲು ಹಿಂದೂಗಳು ಖಡ್ಗ ಹಿಡಿಯಬೇಕಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಹಿಂದೂವೂ ಕೈಯಲ್ಲಿ ಖಡ್ಗ ಹಿಡಿದು ಹೋರಾಟ ನಡೆಸಬೇಕು ಎಂದು ತೆಲಂಗಾಣದ ಶಾಸಕ ರಾಜಾಸಿಂಗ್ ಠಾಕೂರ್ ತಿಳಿಸಿದ್ದಾರೆ.

ನಗರದಲ್ಲಿ ಡಿ.12ರಂದು ಶ್ರೀರಾಮ ಸೇನೆ ಹಮ್ಮಿಕೊಂಡಿದ್ದ ವಿರಾಟ್ ಸಮಾವೇಶದಲ್ಲಿ ರಾಜಾಸಿಂಗ್, ಇಲ್ಲಿ ನೆರೆದಿರುವ ಎಷ್ಟು ಮಂದಿ ಕಾಳಗಕ್ಕೆ ಸಿದ್ಧರಾಗಿದ್ದೀರ ಎಂದು ಪ್ರಶ್ನಿಸಿದ್ದಾರೆ. ಸಮಾವೇಶದಲ್ಲಿ ಒಬ್ಬನ ಕೈಯಲ್ಲಿ ಮಾತ್ರ ಖಡ್ಗ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಹಿಂದೂವಿನ ಕೈಯಲ್ಲೂ ಖಡ್ಗಗಳಿರಬೇಕು ಎಂದು ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದ್ದಾರೆ. ದೆಹಲಿಯಲ್ಲಿ ಓರ್ವ ದೇಶದ್ರೋಹಿ ಮನೆ ಮನೆಯಲ್ಲೂ ಅಫಜಲ್ ಹುಟ್ಟಬೇಕು ಎನ್ನುತ್ತಾನೆ. ಇಂತಹ ಎಷ್ಟೇ ಅಫಜಲ್’ಗಳು ಹುಟ್ಟಿಕೊಂಡರೂ ನಾವು ಹತ್ಯೆ ಮಾಡುತ್ತೇವೆ.

ನಿನ್ನೆಯ ಹಿಂದೂಗಳು ಗಾಂಧಿ ರೀತಿಯಲ್ಲಿದ್ದರು. ಆದರೆ, ಇಂದಿನ  ಹಿಂದೂಗಳು ಛತ್ರಪತಿ ಶಿವಾಜಿ ರೀತಿಯಂತಿದ್ದಾರೆ ಎಂದಿದ್ದಾರೆ. ಶಾಸಕರ ಈ ರೀತಿಯ ಪ್ರಚೋದನಾಕಾರಿ ಭಾಷಣ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. 

ಸ್ವಯಂ ಪ್ರೇರಿತ ದೂರು: ವಿರಾಟ್ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ತೆಲಂಗಾಣ ಶಾಸಕ ರಾಜಾಸಿಂಗ್ ಠಾಕೂರ್, ಶ್ರೀರಾಮಸೇನೆಯ ರಾಷ್ಟ್ರಾಧ್ಯಕ್ಷ  ಪ್ರಮೋದ್ ಮುತಾಲಿಕ್, ಸೇನೆ ರಾಜ್ಯ ಗೌರವಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಹೈದ್ರಾಬಾದ್ ಕರ್ನಾಟಕ ಭಾಗದ ಅಧ್ಯಕ್ಷ ವಿಜಯ ಪಾಟೀಲ್ ಸೇರಿದಂತೆ ಇತರರ ವಿರುದ್ಧ ಯಾದಗಿರಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು