ಶಂಕಿತ ಉಗ್ರರ ಬಳಿ ಶಸ್ತ್ರವೇ ಇರಲಿಲ್ಲ; ಪೊಲೀಸರ ಮೇಲೆ ದಾಳಿ ಹೇಗೆ ಸಾಧ್ಯ?

Published : Nov 03, 2016, 04:48 AM ISTUpdated : Apr 11, 2018, 12:59 PM IST
ಶಂಕಿತ ಉಗ್ರರ ಬಳಿ ಶಸ್ತ್ರವೇ ಇರಲಿಲ್ಲ; ಪೊಲೀಸರ ಮೇಲೆ ದಾಳಿ ಹೇಗೆ ಸಾಧ್ಯ?

ಸಾರಾಂಶ

‘‘ಎಂಟು ಮಂದಿಗೂ ಪೊಲೀ​ಸರು ಸೊಂಟ​ಕ್ಕಿಂತ ಮೇಲ್ಬಾ​ಗ​ದಲ್ಲೇ ಗುರಿ​ ಇಟ್ಟು ಗುಂಡು ಹೊಡೆ​­­ದಿ​­ದ್ದಾರೆ. ನ್ಯಾಯಾ​ಲ​ಯ​ಗಳ ಆದೇ​ಶ​ಗ​ಳ ಆಧಾ​ರ­ದಲ್ಲಿ ಹೇಳು​ವು​ದಾ​ದರೆ ಪೊಲೀ​ಸರು ಸೊಂಟ​ಕ್ಕಿಂತ ಕೆಳ​ಭಾ​ಗ​ಕ್ಕಷ್ಟೇ ಗುಂಡು ಹಾರಿ​ಸ­ಬೇಕು. ಈ ಪ್ರಕ​ರ​ಣ​ದಲ್ಲಿ ಸಮೀ​ಪ​­ದಿಂದಲೇ ತಲೆ, ಎದೆಗೆ ಗುಂಡಿಕ್ಕ­ಲಾ­ಗಿದೆ.''

ಭೋಪಾಲ/ಕೋಲ್ಕತಾ: ಭೋಪಾಲ ಕೇಂದ್ರ ಕಾರಾಗೃಹದಿಂದ ಪಾರಾರಿಯಾಗಿ ಎನ್‌ಕೌಂಟರ್‌ನಲ್ಲಿ ಅಸುನೀಗಿದ ಶಂಕಿತ ಸಿಮಿ ಕಾರ್ಯಕರ್ತರ ಬಳಿ ಆಯುಧಗಳೇ ಇರಲಿಲ್ಲ ಎಂದು ಮಧ್ಯಪ್ರದೇಶ ಉಗ್ರ ನಿಗ್ರಹ ದಳ (ಎಟಿಎಸ್‌)ಮುಖ್ಯಸ್ಥ ಸಂಜೀವ್‌ ಶಮಿ ಹೇಳಿ​ದ್ದಾರೆ. 
‘‘ ಶಂಕಿತ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆ​ಸಿ​ದರು. ಈ ವೇಳೆ ಪೊಲೀ​ಸರು ಮಾಡಿದ ಫೈರಿಂಗ್‌​ನಲ್ಲಿ ಉಗ್ರರು ಸತ್ತಿ​ದ್ದಾರೆ,'' ಎಂದು ಅಲ್ಲಿನ ಐಜಿಪಿ ಯೋಗೇಶ್‌ ಚೌದ್ರಿ ಹೇಳಿ​ದ್ದರು. ಆದರೆ, ಉಗ್ರರ ಬಳಿ ಶಸ್ತ್ರಾ​ಸ್ತ್ರ​ಗಳೇ ಇರ​ಲಿಲ್ಲ ಎಂದು ಶಮಿ ಅವರು ನೀಡಿರುವ ಈ ಹೇಳಿಕೆ ಪ್ರಕ​ರ​ಣಕ್ಕೆ ಹೊಸ ತಿರುವು ನೀಡಿದೆ. 

‘‘ಪೊಲೀಸರ ಬಲಪ್ರಯೋಗದ ಬಗ್ಗೆ ಕಾನೂನಿ­ನಲ್ಲಿ ಸ್ಪಷ್ಟ​ವಾಗಿದೆ. ಅಪಾಯಕಾರಿ ಕ್ರಿಮಿನಲ್‌ಗಳು ತಪ್ಪಿ​ಸಿ​ಕೊ​ಳ್ಳುತ್ತಿದ್ದಾರೆ ಎಂದಾಗ ಗರಿಷ್ಠ ಶಕ್ತಿ ಪ್ರಯೋ​ಗಿ​ಸ​ಲು ಸಾಧ್ಯ,'​ ಎಂದೂ ಅವರು ಹೇಳಿ​ದ್ದಾರೆ. ಅಂಥ ವ್ಯಕ್ತಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ​ಯಿದೆ ಎಂದು ಪೊಲೀಸರಿಗೆ ಮನವರಿಕೆ​ಯಾದಾಗ, ಅವರು ಗರಿಷ್ಠ ಪ್ರಮಾಣ ಶಕ್ತಿ ಪ್ರಯೋಗಿಸಬಹುದು'' ಎಂದೂ ಸಂಜೀವ್‌ ಶಮಿ ಹೇಳಿದ್ದಾರೆ ಎಂದು ಎನ್‌​ಡಿಟಿವಿ ವರದಿ ಮಾಡಿದೆ. 

ಇತರರ ವೈದ್ಯಕೀಯ ಪರೀಕ್ಷೆಗೆ ಅರ್ಜಿ: ಜೈಲಿನಲ್ಲಿ ಇರುವ ಇತರ ಶಂಕಿತ ಸಿಮಿ ಕಾರ್ಯಕರ್ತರ ವೈದ್ಯ​ಕೀಯ ಪರೀಕ್ಷೆ ನಡೆಸಲು ತಾವು ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ದಾಖಲಿ​ಸುವುದಾಗಿ ಫರ್ವೇಜ್‌ ತಿಳಿಸಿ​ದ್ದಾರೆ. ಎನ್‌​​ಕೌಂಟರ್‌ಗೆ ಬಲಿಯಾದ ಎಲ್ಲರ ಮೃತದೇಹಗಳನ್ನು ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಆದರೆ ಅಹಮದಾ​ಬಾದ್‌ ಮೂಲದ ಶೇಖ್‌ ಮುಜೀಬ್‌ನ ಮೃತದೇಹವನ್ನು ಆತನ ಕುಟುಂಬ​ಸ್ಥರು ತವರೂರಿಗೆ ತೆಗೆದುಕೊಂಡು ಹೋಗಿ​​ದ್ದಾರೆ. ಮೃತರ ಎಲ್ಲ ಕುಟುಂಬ​ಸ್ಥರು ಪೊಲೀಸ್‌ ಎನ್‌ಕೌಂಟರ್‌ನ ಸತ್ಯಾಸತ್ಯತೆಯ ಕುರಿತು ಪ್ರಶ್ನಿಸಿದ್ದಾರೆ. 

ಮರ​ಣೋ​ತ್ತರ ವರದಿ ಪ್ರಕಟ: ಶಂಕಿತ ಸಿಮಿ ಕಾರ್ಯಕರ್ತರಲ್ಲಿ ಎಲ್ಲರಿಗೂ ಕನಿಷ್ಠ ಎರಡು ಬಾರಿ ಗುಂಡೇಟು ತಗುಲಿದೆ. ಅವುಗಳಲ್ಲಿ ಕೆಲವು ಹಿಂದಿನಿಂದಲೂ ತಗುಲಿವೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿಸಲಾಗಿದೆ ಎಂದು ‘ಎನ್‌ಡಿಟಿವಿ' ವರದಿ ಮಾಡಿದೆ. ಎಲ್ಲ ಎಂಟು ಮಂದಿ ಗುಂಡೇಟಿ​ನಿಂದ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿರುವ ತಜ್ಞರು ವರದಿ ನೀಡಿದ್ದಾರೆ. ಕೆಲವರಿಗೆ ಸೊಂಟದ ಮೇಲೆ ಎರಡಕ್ಕಿಂತ ಹೆಚ್ಚು ಗುಂಡು ತಗು​​ಲಿವೆ. ನಾಲ್ಕು ಮಂದಿಯ ಪ್ರಕರಣ​ಗಳಲ್ಲಿ ಗುಂಡುಗಳು ದೇಹಗಳನ್ನು ತೂರಿ ಹೋಗಿವೆ. 

ಅನು​ಮಾನದ ಗುಂಡೇ​ಟು:
‘‘ಎಂಟು ಮಂದಿಗೂ ಪೊಲೀ​ಸರು ಸೊಂಟ​ಕ್ಕಿಂತ ಮೇಲ್ಬಾ​ಗ​ದಲ್ಲೇ ಗುರಿ​ ಇಟ್ಟು ಗುಂಡು ಹೊಡೆ​­­ದಿ​­ದ್ದಾರೆ. ನ್ಯಾಯಾ​ಲ​ಯ​ಗಳ ಆದೇ​ಶ​ಗ​ಳ ಆಧಾ​ರ­ದಲ್ಲಿ ಹೇಳು​ವು​ದಾ​ದರೆ ಪೊಲೀ​ಸರು ಸೊಂಟ​ಕ್ಕಿಂತ ಕೆಳ​ಭಾ​ಗ​ಕ್ಕಷ್ಟೇ ಗುಂಡು ಹಾರಿ​ಸ­ಬೇಕು. ಈ ಪ್ರಕ​ರ​ಣ​ದಲ್ಲಿ ಸಮೀ​ಪ​­ದಿಂದಲೇ ತಲೆ, ಎದೆಗೆ ಗುಂಡಿಕ್ಕ­ಲಾ­ಗಿದೆ,''ಎಂದು ವಕೀಲ ಫರ್ವೇಜ್‌ ಆಲಂ ಮಾಧ್ಯ​ಮ​ಗ​ಳಿಗೆ ತಿಳಿ​ಸಿ​ದ್ದಾರೆ. 

(ಕೃಪೆ: ಕನ್ನಡಪ್ರಭ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ