ಮತದಾನ ಜಾಗೃತಿ ಮೂಡಿಸುವ ಅವಸರದಲ್ಲಿ ಎಡವಟ್ಟು: 2014 ರ ಚುನಾವಣಾ ಪೋಸ್ಟರ್ ಹಾಕಿದ ಅಧಿಕಾರಿಗಳು

Published : Apr 08, 2018, 12:05 PM ISTUpdated : Apr 14, 2018, 01:12 PM IST
ಮತದಾನ ಜಾಗೃತಿ ಮೂಡಿಸುವ ಅವಸರದಲ್ಲಿ ಎಡವಟ್ಟು: 2014 ರ ಚುನಾವಣಾ ಪೋಸ್ಟರ್ ಹಾಕಿದ ಅಧಿಕಾರಿಗಳು

ಸಾರಾಂಶ

ಮತದಾನ ಜಾಗೃತಿ ಮೂಡಿಸುವ ಅವಸರದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. 

ಚಾಮರಾಜನಗರ (ಏ. 08): ಮತದಾನ ಜಾಗೃತಿ ಮೂಡಿಸುವ ಅವಸರದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. 

ಮತದಾನ ಜಾಗೃತಿ ಮೂಡಿಸವ ಅವಸರದಲ್ಲಿ ಕಳೆದ ಲೋಕಸಭಾ ಚುನಾವಣೆಯ ಪೋಸ್ಟರನ್ನು ಅಧಿಕಾರಿಗಳು  ಅಂಟಿಸಿದ್ದಾರೆ.  2014 ರಲ್ಲಿ ಲೋಕಸಭಾ ಚುನಾವಣೆಯ ಅಂಬಾಸಿಡರ್ ಆಗಿದ್ದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಫೋಟೋ ಇರುವ ಫ್ಲೆಕ್ಸನ್ನು ಅಳವಡಿಕೆ ಮಾಡಿದ್ದಾರೆ.   ಈ ಬಾರಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಚುನಾವಣಾ ಅಂಬಾಸಿಡರ್ ಆಗಿದ್ದಾರೆ. ರಾಹುಲ್ ದ್ರಾವಿಡ್ ಬದಲು ಅಬ್ದುಲ್ ಕಲಾಂ ಫೋಟೋ ಹಾಕಿದ್ದಾರೆ. 

ಚಾಮರಾಜನಗರ ಪಟ್ಟಣದ ಹೃದಯ ಭಾಗವಾದ ಭುವನೇಶ್ವರಿ ವೃತ್ತದಲ್ಲಿ  ಪೋಸ್ಟರ್ ಅಳವಡಿಕೆ ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಡಿಸಿ ಟಾರ್ಗೆಟ್; ಎಂಇಎಸ್ ಪರ ನಿಂತು ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ ಮಹಾರಾಷ್ಟ್ರದ ಸಂಸದ ಮಾನೆ!
ಹಿಂದೂಗಳಿಗಿಂತ ಮುಸ್ಲಿಮರ ಮೇಲೆ ಹೆಚ್ಚು ಬಾಂಡ್: ಎಸ್‌ಡಿಪಿಐ ಆರೋಪಕ್ಕೆ ಅಂಕಿ-ಅಂಶ ಸಮೇತ ಕಮಿಷನರ್ ತಿರುಗೇಟು!