ಇವಿಎಂ ಪಾರದರ್ಶಕತೆ ಬಗ್ಗೆ ಅನುಮಾನ ಹಿನ್ನೆಲೆ: ರಾಜಕೀಯ ಪಕ್ಷಗಳಿಗೆ ಓಪನ್ ಚಾಲೆಂಜ್ ಹಾಕಿದ ಆಯೋಗ

Published : May 21, 2017, 08:12 AM ISTUpdated : Apr 11, 2018, 01:02 PM IST
ಇವಿಎಂ ಪಾರದರ್ಶಕತೆ ಬಗ್ಗೆ  ಅನುಮಾನ ಹಿನ್ನೆಲೆ: ರಾಜಕೀಯ ಪಕ್ಷಗಳಿಗೆ ಓಪನ್ ಚಾಲೆಂಜ್ ಹಾಕಿದ ಆಯೋಗ

ಸಾರಾಂಶ

ಇವಿಎಂ ಯಂತ್ರಗಳ ಪಾರದರ್ಶಕತೆ ಪ್ರಶ್ನಿಸುತ್ತಿರುವ ವಿಪಕ್ಷಗಳಿಗೆ ಇವತ್ತು ಕೇಂದ್ರ ಚುನಾವಣಾ ಆಯೋಗ ತಿರುಗೇಟು ನೀಡಿದೆ. ಇವಿಎಂ ಪ್ರಾತ್ಯಕ್ಷಿತೆ ನಡೆಸಿದ್ದಲ್ಲದೇ ಓಪನ್ ಚಾಲೆಂಜ್ ಹಾಕಿದೆ. ಇವಿಎಂ ದುರ್ಬಳಕೆ ಬಗ್ಗೆ ನಿಮ್ಮಲ್ಲಿ  ಸಾಕ್ಷಿ ಇದ್ದರೆ, ಚುನಾವಣಾ ಆಯೋಗಕ್ಕೆ ಸಲ್ಲಿಸಿ ಅಂತಾ ಸವಾಲ್ ಹಾಕಿದೆ.

ನವದೆಹಲಿ(ಮೇ.21): ಇವಿಎಂ ಯಂತ್ರಗಳ ಪಾರದರ್ಶಕತೆ ಪ್ರಶ್ನಿಸುತ್ತಿರುವ ವಿಪಕ್ಷಗಳಿಗೆ ಇವತ್ತು ಕೇಂದ್ರ ಚುನಾವಣಾ ಆಯೋಗ ತಿರುಗೇಟು ನೀಡಿದೆ. ಇವಿಎಂ ಪ್ರಾತ್ಯಕ್ಷಿತೆ ನಡೆಸಿದ್ದಲ್ಲದೇ ಓಪನ್ ಚಾಲೆಂಜ್ ಹಾಕಿದೆ. ಇವಿಎಂ ದುರ್ಬಳಕೆ ಬಗ್ಗೆ ನಿಮ್ಮಲ್ಲಿ  ಸಾಕ್ಷಿ ಇದ್ದರೆ, ಚುನಾವಣಾ ಆಯೋಗಕ್ಕೆ ಸಲ್ಲಿಸಿ ಅಂತಾ ಸವಾಲ್ ಹಾಕಿದೆ.

ಇತ್ತೀಚೆಗೆ ನಡೆದ ಪಂಚರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಇವಿಎಂ ಪಾರದರ್ಶಕತೆ ಬಗ್ಗೆ ಪ್ರಶ್ನೆ ತಲೆದೋರಿದೆ. ಉತ್ತರಪ್ರದೇಶದ ಚುನಾವಣೇಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲು ಇವಿಎಂ ಯಂತ್ರಗಳ ದೋಷವೇ ಕಾರಣವೇ ಅಂತಾ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ  ಆರೋಪ ಮಾಡಿದ್ದರು. ಬಳಿಕ  ಆಪ್, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕೂಡ ಅನುಮಾನ ವ್ಯಕ್ತಪಡಿಸಿದ್ವು. ಒಂದು ಹೆಜ್ಜೆ ಮುಂದೆ ಹೋದ ಆಪ್, ದಿಲ್ಲಿ ವಿಧಾನಸಭೆಯಲ್ಲಿ ಪ್ರಾತ್ಯಕ್ಷಿತೆ ಕೂಡ ಮಾಡಿತ್ತು.

ಪ್ರತಿಪಕ್ಷಗಳ ಆರೋಪಕ್ಕೆವ ನಿನ್ನೆ ಕೇಂದ್ರ ಚುನಾವಣಾ ಆಯೋಗ ತಿರುಗೇಟು ನೀಡಿತ್ತು. ಇವಿಎಂ ಮತ್ತು ವಿವಿಪ್ಯಾಟ್ ಪ್ರಾತ್ಯಕ್ಷಿಕೆ ನಡೆಸಿತು. ಈ ಮೂಲಕ ಇವಿಎಂ ತಿರುಚಲು ಸಾಧ್ಯವೇ ಇಲ್ಲ ಅಂತಾ ಸ್ಪಷ್ಟಪಡಿಸಿತು.

ಇವಿಎಂ ಚಾಲೆಂಜ್! ಆರೋಪ ಸಾಬೀತು ಪಡಿಸಲು ವಿಪಕ್ಷಗಳಿಗೆ ಚಾಲೆಂಜ್

ಸೋಲಿಗೆ ಇವಿಎಂ ಯಂತ್ರಗಳ ಮೇಲೆ ಗೂಬೆ ಕೂರಿಸುತ್ತಿರುವ ಪ್ರತಿಪಕ್ಷಗಳಿಗೆ ಚುನಾವಣಾ ಆಯೋಗ ಓಪನ್ ಚಾಲೆಂಜ್ ಹಾಕಿದೆ. ಜೂನ್ 3 ರಿಂದ ಇವಿಎಂ ಹ್ಯಾಕಥಾನ್ ಆಯೋಜಿಸಲಾಗಿದ್ದು, ಆರೋಪಕ್ಕೆ ಪೂರಕವಾದ ಪುರಾವೆಯನ್ನು ಮೇ 26 ರೊಳಗೆ  ಆಯೋಗಕ್ಕೆ ಸಲ್ಲಿಸಿ ಅಂತಾ ವಿಪಕ್ಷಗಳಿಗೆ ಸವಾಲ್ ಹಾಕಿದೆ.

ಇನ್ನು ಮುಂದೆ ನಡೆಯುವ ಎಲ್ಲಾ ಚುನಾವಣೆಗಳಲ್ಲೂ ವಿವಿಪಿಎಟಿ ಬಳಸಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ. ಒಟ್ನಲ್ಲಿ ಇವಿಎಂ ಪ್ರಾತ್ಯಕ್ಷಿತೆ ನಡೆಸುವ ಮೂಲಕ ಯಾವುದೇ ಕಾರಣಕ್ಕೂ ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ ಅಂತಾ ಸಮರ್ಥಿಸಿಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?