ಮೈತ್ರಿ ಸರ್ಕಾರ ಉಳಿಯಲ್ಲ..ಸದಾನಂದ ಗೌಡರೇನು ಜ್ಯೋತಿಷಿಯೇ!?

Published : Jul 08, 2018, 08:18 PM IST
ಮೈತ್ರಿ ಸರ್ಕಾರ ಉಳಿಯಲ್ಲ..ಸದಾನಂದ ಗೌಡರೇನು ಜ್ಯೋತಿಷಿಯೇ!?

ಸಾರಾಂಶ

ಮೈತ್ರಿ ಸರಕಾರದ ಆಯಸ್ಸಿನ ವಿಚಾರ ಕೇಂದ್ರ ಸಚಿವ ಸದಾನಂದ ಗೌಡ ಮತ್ತುಜಲಸಂಪನ್ಮೂಲ ಸಚಿವ ಡಿ.ಕಡ.ಶಿವಕುಮಾರ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಸದಾನಂದ ಗೌಡ ರ ಹೇಳಿಕೆಗೆ ಡಿಕೆಶಿ ಟಾಂಗ್ ನೀಡಿದ್ದಾರೆ.  

ಮಂಗಳೂರು/ಹಾಸನ[ಜು.8]  ಯಾವುದೇ ಕ್ಷಣದಲ್ಲಾದರೂ ಮೈತ್ರಿ ಸರಕಾರ ಪತನವಾಗಬಹುದು ಎಂದು ಸದಾನಂದ ಗೌಡರು ಹೇಳಿದ್ದಕ್ಕೆ ಹಾಸನದಲ್ಲಿ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ವ್ಯಂಗ್ಯದ ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿ, ರಾಜ್ಯದ ಜನರಿಗೂ ಸಹ ಈ ಸರಕಾರ ಬೇಕಿಲ್ಲ. ಜನಾದೇಶವಿಲ್ಲದೆ ಬಿಜೆಪಿಯನ್ನು ದೂರವಿಡಬೇಕೆಂಬ ಏಕೈಕ ಉದ್ದೇಶದಿಂದ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಕಾಂಗ್ರೆಸ್‌ -ಜೆಡಿಎಸ್‌ ನಾಯಕರ ನಡುವೆ ತೆರೆಮರೆಯಲ್ಲಿ ಕುರ್ಚಿಗಾಗಿ ಕಿತ್ತಾಟ, ಮಂತ್ರಿ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಿದೆ . ಅಭಿವೃದ್ಧಿ ಕಾರ್ಯವನ್ನು ಸರಕಾರ ಮರೆತಿದೆ ಎಂದು ಆರೋಪಿಸಿದ್ದರು.

ಗೌಡರ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್, ಸದಾನಂದಗೌಡ ಅದ್ಯಾವಾಗ ಜ್ಯೋತಿಷಿಯಾದ್ರೊ ಗೊತ್ತಿಲ್ಲ ಎಂಧು ಟಾಂಗ್ ನೀಡಿದರು.

ಸದಾನಂದಗೌಡರು ಬಹಳ ಸಂತೋಷವಾಗಿದ್ದಾರೆ ಅವರು ಆನಂದವಾಗಿರಲಿ. ರಾಜ್ಯದಲ್ಲಿ ವಿರೋಧ ಪಕ್ಷ‌ ಮಲಗಿದೆ ಅವರು‌ ಮೊದಲು ಎಚ್ಚರವಾಗಲಿ,  ನಮ್ಮ ಡ್ಯೂಟಿ ನಾವು ಮಾಡುತ್ತಿದ್ದೇವೆ ಎಂದರು.

ಬಜೆಟ್ ಬಗ್ಗೆ ಕೇವಲ ರಾಜಕೀಯ ದ‌ಕಾರಣದಿಂದ ಟೀಕೆ. ರಾಜ್ಯ ಬಜೆಟ್ ಅತ್ಯಂತ ಶಕ್ತಿ ಶಾಲಿಯಾಗಿದೆ. ಇದು ಎಲ್ಲಾ ವರ್ಗದ ಜನರಿಗೆ ಬಜೆಟ್ ನಲ್ಲಿ ಅನುಕೂಲವಾಗಿದೆ. ಸಾಲಾ ಮನ್ನಾ ಕೇವಲ ಕೆಲವು ಜಿಲ್ಲೆಗೆ ಸೀಮಿತವಾಗಿಲ್ಲ ಎಂದು ಸಮರ್ಥಿಸಿಕೊಂಡರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿವಿ ನೋಡ್ತಿದ್ದ ಬಾಲಕಿಗೆ ಅಪ್ಪನ ಆಗಮನದ ಬಗ್ಗೆ ಸೂಚನೆ ನೀಡಿದ ಜರ್ಮನ್ ಶೆಫರ್ಡ್‌ ಶ್ವಾನ: ವೀಡಿಯೋ ಭಾರಿ ವೈರಲ್
ಭಾರತ ಮಾತ್ರವಲ್ಲ ಮೆಕ್ಸಿಕೋದಲ್ಲೂ ಅದೇ ಕತೆ, ಸದನದಲ್ಲೇ ಜುಟ್ಟು ಹಿಡಿ ಎಳೆದಾಡಿದ ನಾಯಕಿಯರು