ಶ್ರೀರಾಮುಲು, BSY ಜೊತೆ ಡಿಕೆಶಿ ಗಂಭೀರ ಮಾತುಕತೆ

Published : Jul 19, 2019, 08:06 AM IST
ಶ್ರೀರಾಮುಲು, BSY ಜೊತೆ ಡಿಕೆಶಿ ಗಂಭೀರ ಮಾತುಕತೆ

ಸಾರಾಂಶ

ಕಲಾಪದಲ್ಲಿ ಪಸ್ಪರ ಕಿತ್ತಾಟಗಳು ನಡೆದು ವಿಶ್ವಾಸ ಮತ ಪ್ರಕ್ರಿಯೆ ಒಂದೆಡೆ ಮುಂದೂಡಲ್ಪಟ್ಟರೆ, ಇನ್ನೊಂದೆಡೆ ಟ್ರಬಲ್ ಶೂಟರ್ ಡಿಕೆ  ಶಿವಕುಮಾರ್ ಶ್ರೀ ರಾಮುಲು ಜೊತೆ ಮಾತನಾಡಿದರು. 

ವಿಧಾನಸಭೆ [ಜು.19] :  ವಿಶ್ವಾಸಮತಯಾಚನೆ ಸಮರದಲ್ಲಿ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಕಲಾಪ ಮುಂದೂಡಿಕೆಯಾಗಿದ್ದ ಅವಧಿಯಲ್ಲಿ ಪ್ರತಿಪಕ್ಷದ ನಾಯಕರೊಂದಿಗೆ ಆತ್ಮೀಯತೆಯಿಂದ ಚರ್ಚೆ ನಡೆಸಿದ್ದು ಎಲ್ಲರ ಗಮನ ಸೆಳೆಯಿತು.

ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಮತ್ತು ಶಾಸಕ ಶ್ರೀರಾಮುಲು ಜತೆ ಡಿ.ಕೆ.ಶಿವಕುಮಾರ್‌ ಗಂಭೀರವಾಗಿ ಚರ್ಚೆ ನಡೆಸಿದರು. ಸರ್ಕಾರ ಅಳಿವು-ಉಳಿವಿನ ಪರಿಸ್ಥಿತಿಯಲ್ಲಿರುವಾಗ ಡಿ.ಕೆ.ಶಿವಕುಮಾರ್‌ ಪ್ರತಿಪಕ್ಷ ನಾಯಕರೊಂದಿಗೆ ಈ ರೀತಿ ಆತ್ಮೀಯತೆಯಿಂದ ಸಮಾಲೋಚನೆ ನಡೆಸಿದ್ದು ಹಲವರ ಕುತೂಹಲಕ್ಕೆ ಕಾರಣವಾಯಿತು. 

ಗುರುವಾರ ಮಧ್ಯಾಹ್ನ ಸದನವನ್ನು ಭೋಜನಕ್ಕಾಗಿ ಮುಂದೂಡಿದಾಗ ಶ್ರೀರಾಮುಲು ಮಾತ್ರ ಸದನದೊಳಗಿದ್ದರು. ಡಿ.ಕೆ.ಶಿವಕುಮಾರ್‌ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೂ ನಿಮಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲ್ಲ. ರಮೇಶ್‌ ಜಾರಕಿಹೊಳಿ ಪ್ರಮುಖ ಆಕಾಂಕ್ಷಿ, ಮೈತ್ರಿ ಸರ್ಕಾರಕ್ಕೆ ಸಹಕಾರ ನೀಡಿದರೆ ನಿಮಗೆ ಡಿಸಿಎಂ ಸ್ಥಾನ ನೀಡುತ್ತೇವೆ ಎಂದು ಕಿಚಾಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Photos: 6 ವರ್ಷಗಳ ಬಳಿಕ ಮುಂಡಗೋಡಿಗೆ ಆಗಮಿಸಿದ ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ!
Actress Assault Case: ಆರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಿಸಿದ ಕೇರಳ ಕೋರ್ಟ್‌