
ಮಡಿಕೇರಿ (ಡಿ.27): ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ದಿಡ್ಡಳ್ಳಿಯ ನಿರಾಶ್ರಿತರಿಗೆ ಸವಲತ್ತುಗಳ ಮಹಾಪೂರವೇ ಹರಿದು ಬರುತ್ತಿದೆ.
ಏಕಾಏಕಿ ಅರಣ್ಯ ಇಲಾಖೆ ದಾಳಿಯಿಂದ ಸೂರು ನೆಲೆ ಕಳೆದುಕೊಂಡಿರುವ ಮಂದಿಗೆ ಸದ್ಯಕ್ಕೆ ಟಾರ್ಪಲ್ ಮತ್ತು ಮೂರು ಹೊತ್ತಿನ ಊಟ ಸಿಗುವ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾಡಳಿತ ನೀಡುತ್ತಿರುವ ಸವಲತ್ತುಗಳಿಗೆ ಗಿರಿಜನ ವಾಸಿಗಳು ಖುಷಿಯಾಗಿದ್ದಾರೆ. ತಮ್ಮ ಹೋರಾಟಕ್ಕೆ ಸಿಕ್ಕ ಜಯ ಎನ್ನುವ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ.
ದಿನವೊಂದಕ್ಕೆ ಒಂದು ಕ್ವಿಂಟಾಲ್ 10 ಕೆ.ಜಿ ಅಕ್ಕಿ ಅವಶ್ಯಕತೆ ಇದೆ. ಎರಡು ಹೊತ್ತು ಅನ್ನ ಸಾಂಬಾರ್,ಪಲ್ಯ,ಉಪ್ಪಿನ ಕಾಯಿ ಸೇರಿದಂತೆ ಬೆಳಗ್ಗಿನ ಹೊತ್ತಿಗೆ ವಿವಿಧ ರೈಸ್ ಐಟಂಗಳು ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಪೂರ್ಣ ಜವಬ್ದಾರಿಯನ್ನು ಕುಶಾಲನಗರದ ಕ್ಯಾಟರಿಂಗ್ ವೊಬ್ಬರಿಗೆ ಸಮಾಜ ಕಲ್ಯಾಣ ಇಲಾಖೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.