
ತಿರುಪತಿ(ಸೆ.25): ಆಂಧ್ರಪ್ರದೇಶದ ವಿಜಯವಾಡದ ಉದ್ಯಮಿ ಭಕ್ತರೊಬ್ಬರು ತಿರುಪತಿ ತಿಮ್ಮಪ್ಪನಿಗೆ ಸುಮಾರು 8.36 ಕೋಟಿ ರು. ಮೌಲ್ಯದ ‘ಸಹಸ್ರ ನಾಮ ಮಾಲಾ’ (ಚಿನ್ನದ ಹಾರ) ಉಡುಗೊರೆಯಾಗಿ ಅರ್ಪಿಸಿದ್ದಾರೆ.
ಒಂಬತ್ತು ದಿನಗಳ ವಾರ್ಷಿಕ ಬ್ರಹ್ಮೋತ್ಸವ ಹಬ್ಬದ ಮೊದಲ ದಿನ, ಸುಮಾರು 28 ಕೆ.ಜಿ. ತೂಕ ತೂಗುವ, ವೆಂಕಟೇಶ್ವರ ದೇವರ 1008 ಪವಿತ್ರ ಹೆಸರುಗಳ 1008 ಚಿನ್ನದ ನಾಣ್ಯಗಳುಳ್ಳ ಬೃಹತ್ ಚಿನ್ನದ ಹಾರವನ್ನು ಉದ್ಯಮಿ ಭಕ್ತ ಎಂ. ರಾಮಲಿಂಗ ರಾಜು, ದೇವರಿಗೆ ಒಪ್ಪಿಸಿದ್ದಾರೆ.
ಸಿಎಂ ಎನ್. ಚಂದ್ರಬಾಬು ನಾಯ್ಡು ಉಪಸ್ಥಿತಿಯಲ್ಲಿ ಹಿರಿಯ ಅರ್ಚಕರು ಮತ್ತು ದೇವಳದ ಹಿರಿಯ ಅಧಿಕಾರಿಗಳಿಗೆ ರಾಮಲಿಂಗ ರಾಜು ಈ ಹಾರ ಸಮರ್ಪಿಸಿದರು. ಬ್ರಹ್ಮೋತ್ಸವದ ಸಂದರ್ಭ ರೇಷ್ಮೆ ವಸ್ತ್ರ ಅರ್ಪಿಸುವ ಸಾಂಪ್ರದಾಯಿಕ ಆಚರಣೆಯ ಹಿನ್ನೆಲೆಯಲ್ಲಿ ನಾಯ್ಡು ದೇವಸ್ಥಾನಕ್ಕೆ ಆಗಮಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.