20 ವರ್ಷಗಳ ನಂತರ ಮೊದಲ ಬಾರಿಗೆ ಗೌಡರು ಸರ್ವಪಕ್ಷ ಸಭೆಯಲ್ಲಿ ಭಾಗಿ

By Internet DeskFirst Published Sep 21, 2016, 12:56 PM IST
Highlights

ಬೆಂಗಳೂರು(ಸೆ.21): ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಧ್ಯಕ್ಷ ಹೆಚ್.ಡಿ. ದೇವೇಗೌಡರು 20 ವರ್ಷದ ನಂತರ ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. 1996ರ ನಂತರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಮೊದಲ ಬಾರಿ ಪಾಲ್ಗೊಳ್ಳುತ್ತಿದ್ದಾರೆ.

ಮುಖ್ಯಮಂತ್ರಿ ಭೇಟಿ ನಂತರ ಮಾತನಾಡಿದ ದೇವೇಗೌಡರು, '1996 ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿ ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗುತ್ತಿದ್ದೇನೆ. ನನ್ನ ಸಲಹೆಗಳನ್ನು ಸಭೆ ಮುಂದೆ ನೀಡುತ್ತೇನೆ. ಸಿ.ಎಂ ಅವರು ಭೇಟಿಯಾಗಿ ಸರ್ವ'ಪಕ್ಷ ಸಭೆಗೆ ಬರಬೇಕೆಂದು ಹೇಳಿದರು. ಈ ಹಿನ್ನೆಲೆಯಲ್ಲಿ  ಸಭೆಗೆ ಹೋಗುತ್ತಿದ್ದೇನೆ.ಎಲ್ಲರೂ ಕಾವೇರಿ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸುವುದಕ್ಕೆ ಹೇಳಿದ್ದೇನೆ. ಐಕ್ಯತೆಗೆ ಸಂದೇಶ ರವಾನಿಸುವ ಸಲುವಾಗಿ ಸಭೆಗೆ ಹೋಗುತ್ತಿದ್ದೇನೆ' ಎಂದರು.

‘ತಮಿಳುನಾಡಿಗೆ ಕಾವೇರಿ ನೀರು ಬಿಡಬೇಡಿ,ಯಾವುದೇ ಪರಿಣಾಮ ಎದುರಿಸಲು ಸಜ್ಜಾಗಿರಿ. ಸರ್ಕಾರದ ವಿರುದ್ಧ ಕೋರ್ಟ್​ ಯಾವುದೇ ಕ್ರಮ ಕೈಗೊಳ್ಳಬಹುದು' ಎಂದು ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದ್ದೇನೆ.ಸುಪ್ರೀಂಕೋರ್ಟ್ ಆದೇಶ

 ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ' ಎಂದು ತಿಳಿಸಿದರು

click me!