ಡೇರಾ ಹಿಂಸಾಚಾರದಲ್ಲಿ ನೂರಾರು ಕೋಟಿ ನಷ್ಟ

Published : Jan 17, 2018, 08:35 AM ISTUpdated : Apr 11, 2018, 01:02 PM IST
ಡೇರಾ ಹಿಂಸಾಚಾರದಲ್ಲಿ ನೂರಾರು ಕೋಟಿ ನಷ್ಟ

ಸಾರಾಂಶ

ಪಂಚಕುಲದಲ್ಲಿ ಕಳೆದ ಆಗಸ್ಟ್‌ನಲ್ಲಿ ಸಿಬಿಐ ವಿಶೇಷ ಕೋರ್ಟ್‌ನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಶಿಕ್ಷೆಗೆ ಗುರಿಯಾಗಿ, ಜೈಲು ಸೇರಿದ ಸಂದರ್ಭ ಹರ್ಯಾಣದಲ್ಲಿ ನಡೆದ ಹಿಂಸಾಚಾರದ ವೇಳೆ 126 ಕೋಟಿ ರು. ನಷ್ಟವಾಗಿದೆ.

ಚಂಡೀಗಢ: ಪಂಚಕುಲದಲ್ಲಿ ಕಳೆದ ಆಗಸ್ಟ್‌ನಲ್ಲಿ ಸಿಬಿಐ ವಿಶೇಷ ಕೋರ್ಟ್‌ನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಶಿಕ್ಷೆಗೆ ಗುರಿಯಾಗಿ, ಜೈಲು ಸೇರಿದ ಸಂದರ್ಭ ಹರ್ಯಾಣದಲ್ಲಿ ನಡೆದ ಹಿಂಸಾಚಾರದ ವೇಳೆ 126 ಕೋಟಿ ರು. ನಷ್ಟವಾಗಿದೆ.

ಹರ್ಯಾಣದ ವಿವಿಧ ಜಿಲ್ಲೆಗಳಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಬೃಹತ್ ಮೊತ್ತದ ಸಾರ್ವಜನಿಕ ಆಸ್ತಿ ನಷ್ಟವಾಗಿತ್ತು. ಹಿಂಸಾಚಾರ ಸಂಭವಿಸಿದ ಜಿಲ್ಲೆಗಳ ಪೈಕಿ ಅಂಬಾಲದಲ್ಲಿ ಗರಿಷ್ಠ  42.84 ಕೋಟಿ ನಷ್ಟವಾಗಿದೆ.

ಫತೇಬಾದ್‌ನಲ್ಲಿ 14.87 ಕೋಟಿ ರು. ನಷ್ಟವಾಗಿತ್ತು. ನಷ್ಟದ ಅಂದಾಜು ಹಾಕಿ, ಆ ಮೊತ್ತ ವನ್ನು ಗುರ್ಮೀತ್‌ನ ಸಂಘಟನೆಯಿಂದ ವಸೂಲು ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಮನೂರು ಶಿವಶಂಕರಪ್ಪ ನಿಧನ; ತಿರುಪತಿ ಪ್ರಯಾಣ ರದ್ದು, ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್ ಕುಟುಂಬ ತಕ್ಷಣ ವಾಪಸ್!
ಹೊಸಕೋಟೆಗೆ ಕಾಂಗ್ರೆಸ್‌ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?