ಆದಿ ಚುಂಚನಗಿರಿಗೆ ಆಗಮಿಸಲಿದ್ದಾರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

By suvarna Web DeskFirst Published Nov 28, 2017, 8:35 AM IST
Highlights

ಡಿಸೆಂಬರ್ 10ರಂದು, ಕಾಲ ಭೈರವನ ನವನಾಥ ಸಂಭ್ರಮ ಮತ್ತು ಮಾಲೆ ವೃತದ ಹಿನ್ನೆಲೆಯಲ್ಲಿ ಭೇಟಿ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾಗಿರುವ ನಿರ್ಮಲಾನಂದ ಸ್ವಾಮೀಜಿ ಅವರು  ಯೋಗಿ ಅವರ ಭೇಟಿ ಅಧಿಕೃತಗೊಂಡ ನಂತರವಷ್ಟೇ ತಿಳಿಸುವುದಾಗಿ ಹೇಳಿದ್ದಾರೆ.

ಮಂಡ್ಯ(ನ.28): ಉತ್ತರ ಪ್ರದೇಶದ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಅವರು ಶೀಘ್ರದಲ್ಲೇ ರಾಜ್ಯಕ್ಕೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಇನ್ನೇನು ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಶ್ರೀ ಕ್ಷೇತ್ರ  ಆದಿ ಚುಂಚನಗಿರಿಗೆ ಯೋಗಿ ಅವರು ಭೇಟಿ ನೀಡಲಿದ್ದಾರೆ.   ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್ ಷಾ ಅವರೂ ಕೂಡ ರಾಜ್ಯಕ್ಕೆ ಆಗಮಿಸಿದ್ದ ವೇಳೆ ಶ್ರೀ ಕ್ಷೇತ್ರ ಆದಿ ಚುಂಚನಗಿರಿಗೆ ಭೇಟಿ ನೀಡಿದ್ದರು.  ಇದೀಗ ಇಲ್ಲಿಗೆ ಭೇಟಿ ನೀಡುವುದು ಯೋಗಿ ಆದಿತ್ಯನಾಥ್ ಅವರ ಸರದಿಯಾಗಿದೆ.

ಈ ಬಗ್ಗೆ ಮಂಡ್ಯದಲ್ಲಿ  ಮಾತುಗಳು ಕೇಳಿಬರುತ್ತಿದ್ದು, ಡಿಸೆಂಬರ್ 10ರಂದು, ಕಾಲ ಭೈರವನ ನವನಾಥ ಸಂಭ್ರಮ ಮತ್ತು ಮಾಲೆ ವೃತದ ಹಿನ್ನೆಲೆಯಲ್ಲಿ ಭೇಟಿ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾಗಿರುವ ನಿರ್ಮಲಾನಂದ ಸ್ವಾಮೀಜಿ ಅವರು  ಯೋಗಿ ಅವರ ಭೇಟಿ ಅಧಿಕೃತಗೊಂಡ ನಂತರವಷ್ಟೇ ತಿಳಿಸುವುದಾಗಿ ಹೇಳಿದ್ದಾರೆ.

Latest Videos

click me!