ರಸ್ತೆ ಇಲ್ಲದ್ದರಿಂದ ತೆಪ್ಪದಲ್ಲಿ ಶವ ಸಾಗಿಸಿದರು!

Published : Aug 27, 2018, 10:26 AM ISTUpdated : Sep 09, 2018, 10:19 PM IST
ರಸ್ತೆ ಇಲ್ಲದ್ದರಿಂದ ತೆಪ್ಪದಲ್ಲಿ ಶವ ಸಾಗಿಸಿದರು!

ಸಾರಾಂಶ

ಮೃತ​ದೇ​ಹ​ವನ್ನು ಸ್ವಗ್ರಾ​ಮಕ್ಕೆ ಒಯ್ಯಲು ಸರಿ​ಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣದಿಂದ ತೆಪ್ಪದಲ್ಲಿಯೇ ಶವವನ್ನು ಸಾಗಿಸಿದ ಘಟನೆ ಮೂಡಿಗೆರೆಯಲ್ಲಿ ನಡೆದಿದೆ. ನದಿಗೆ ಸೇತುವೆಯೂ ಇಲ್ಲದ ಕಾರಣ ತೆಪ್ಪವೇ ಇಲ್ಲಿನ ಜನರಿಗೆ ಆಧಾ​ರ​ವಾ​ಗಿದೆ

ಮೂಡಿಗೆರೆ :  ಅನಾ​ರೋ​ಗ್ಯ​ದಿಂದ ನಿಧ​ನ​ರಾದ ವೃದ್ಧೆ​ಯೊ​ಬ್ಬರ ಶವ​ವನ್ನು ತೆಪ್ಪದ ಮೂಲಕವೇ ಅವ​ರ ಮನೆಗೆ ಸಾಗಿ​ಸಿದ ಮನ​ಕು​ಲ​ಕುವ ಪ್ರಸಂಗ ತಾಲೂಕಿನ ಹೊಳೆಕುಡಿಗೆ ಗ್ರಾಮದಲ್ಲಿ ನಡೆ​ದಿದೆ.

ಗ್ರಾಮದ ಲಕ್ಷ್ಮ​ಮ್ಮ (70) ಎಂಬುವವರ ಮೃತ​ದೇ​ಹ​ವನ್ನು ಅಂತಿಮ​ಸಂಸ್ಕಾ​ರಕ್ಕಾಗಿ ಸ್ವಗ್ರಾ​ಮ​ಕ್ಕೆ ತೆಪ್ಪದ ಮೂಲಕ ಸಾಗಿ​ಸಲಾ​ಯಿತು. ತೀವ್ರ ಅನಾ​ರೋ​ಗ್ಯಕ್ಕೆ ತುತ್ತಾ​ಗಿದ್ದ ಲಕ್ಷ್ಮಮ್ಮ ಅವ​ರನ್ನು ಈ ಹಿಂದೆ ತೆಪ್ಪ​ದಲ್ಲೇ ಕರೆ​ದೊಯ್ದು ಮಂಗ​ಳೂ​ರಿನ ಆಸ್ಪ​ತ್ರೆಗೆ ದಾಖ​ಲಿ​ಸ​ಲಾ​ಗಿತ್ತು. ಆದರೆ, ಅವರು ಚಿಕಿತ್ಸೆ ಫಲಿ​ಸದೆ ಕೊನೆ​ಯು​ಸಿ​ರೆ​ಳೆದಿ​ದ್ದರು. ಮೃತ​ದೇ​ಹ​ವನ್ನು ಸ್ವಗ್ರಾ​ಮಕ್ಕೆ ಒಯ್ಯಲು ಸರಿ​ಯಾದ ರಸ್ತೆ ವ್ಯವಸ್ಥೆ ಇಲ್ಲ. ಹೀಗಾಗಿ, ಗ್ರಾಮ​ಸ್ಥರು ಎಲ್ಲಿಗೆ ಹೋದರೂ ಭದ್ರಾ ನದಿ ದಾಟಿ​ಕೊಂಡೇ ಹೋಗ​ಬೇಕು. ಅದೇ ರೀತಿ ಗ್ರಾಮ​ಸ್ಥರು ತೆಪ್ಪ​ದಲ್ಲೇ ವೃದ್ಧೆಯ ಮೃತ​ದೇ​ಹ​ವನ್ನು ಅವರ ಮನೆಗೆ ಸಾಗಿ​ಸಿ​ದ್ದಾರೆ.

ಕೊವೆ ಗ್ರಾಪಂ ವ್ಯಾಪ್ತಿಯಲ್ಲಿರುವ ಹೊಳೆಕೊಡಿಗೆ ಗ್ರಾಮದಲ್ಲಿ ಆದಿವಾಸಿ ಜನಾಂಗದ 6 ಕುಟುಂಬ ವಾಸಿ​ಸು​ತ್ತಿವೆ. ಈ ಗ್ರಾಮ​ಸ್ಥರು ಮಾಗುಂಡಿ ಹಾಗೂ ಬಾಳೆಹೊನ್ನೂರು ಅಥವಾ ಮೂಡಿಗೆರೆ ಹೋಗ​ಬೇ​ಕಾ​ದರೆ, ನದಿಗೆ ಸೇತುವೆ ಇಲ್ಲದ ಕಾರಣ ತೆಪ್ಪವೇ ಆಧಾ​ರ​ವಾ​ಗಿದೆ. ಗ್ರಾಮಕ್ಕೆ ರಸ್ತೆ ಇದ್ದರೂ, ಕಾಫಿ ಎಸ್ಟೇಟಿನ ಮಾಲೀಕರು ಅದನ್ನು ಒತ್ತು​ವರಿ ಮಾಡಿ​ಕೊಂಡಿ​ದ್ದಾರೆ. ಹೀಗಾಗಿ, ಗ್ರಾಮ​ಸ್ಥ​ರೆಲ್ಲ ತೆಪ್ಪದ ಮೂಲಕ ನದಿ ದಾಟಿಯೇ ತಮ್ಮ ದಿನ​ನಿ​ತ್ಯದ ಕೆಲ​ಸ​ಗ​ಳಿಗೆ ತೆರ​ಳ​ಬೇ​ಕು. ಮಳೆ​ಗಾ​ಲ​ದ​ಲ್ಲಂತೂ ಭದ್ರಾ ನದಿ ಉಕ್ಕಿ ಹರಿ​ಯು​ವು​ದ​ರಿಂದ ಗ್ರಾಮ​ಸ್ಥರು ಪ್ರಾಣ​ಭ​ಯ​ದಿಂದಲೇ ಓಡಾ​ಡುವ ಪರಿ​ಸ್ಥಿತಿ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

5 ಸಾವಿರ ಕೊಡ್ತೀನಿ ರೂಮ್‌ಗೆ ಬಾ ಅಂದ್ರು? ಬ್ರಹ್ಮಾನಂದ ಗುರೂಜಿಯ ವಿಡಿಯೋ ವೈರಲ್
ಬೆಂಗಳೂರಿಗಾಗಿ ಶ್ರಮಿಸಿದೆವು ಆದ್ರೂ ತಮ್ಮನನ್ನು ಸೋಲಿಸಿದ್ರಿ: ಅಪಾರ್ಟ್‌ಮೆಂಟ್‌ ನಿವಾಸಿಗಳ ವಿರುದ್ಧ ಕಿಡಿಯಾದ ಡಿಕೆಶಿ