ಭಾರತದ ಭದ್ರತೆ ಕಣ್ತಪ್ಪಿಸಿ ದಾವೂದ್ ಪತ್ನಿ ಮುಂಬೈಗೆ! ಸ್ಫೋಟಕ ಮಾಹಿತಿ ಬಹಿರಂಗ

Published : Sep 23, 2017, 12:26 PM ISTUpdated : Apr 11, 2018, 12:47 PM IST
ಭಾರತದ ಭದ್ರತೆ ಕಣ್ತಪ್ಪಿಸಿ ದಾವೂದ್ ಪತ್ನಿ ಮುಂಬೈಗೆ! ಸ್ಫೋಟಕ ಮಾಹಿತಿ ಬಹಿರಂಗ

ಸಾರಾಂಶ

ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಗಳು ಹದ್ದಿನಗಣ್ಣಿಟ್ಟಿದ್ದರೂ ದೇಶದ ‘ಮೋಸ್ಟ್ ವಾಂಟೆಡ್ ಭಯೋತ್ಪಾದಕ’ ದಾವೂದ್ ಇಬ್ರಾಹಿಂ ಪತ್ನಿ ಮೆಹಜಬೀನ್ ಶೇಖ್ ಕಳೆದ ವರ್ಷ ಸದ್ದಿಲ್ಲದೇ ಭಾರತಕ್ಕೆ ಬಂದು, ತನ್ನ ತಂದೆಯನ್ನು ಭೇಟಿ ಮಾಡಿ ವಾಪಸ್ ಹೋಗಿರುವ ಸ್ಫೋಟಕ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.

ಮುಂಬೈ: ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಗಳು ಹದ್ದಿನಗಣ್ಣಿಟ್ಟಿದ್ದರೂ ದೇಶದ ‘ಮೋಸ್ಟ್ ವಾಂಟೆಡ್ ಭಯೋತ್ಪಾದಕ’ ದಾವೂದ್ ಇಬ್ರಾಹಿಂ ಪತ್ನಿ ಮೆಹಜಬೀನ್ ಶೇಖ್ ಕಳೆದ ವರ್ಷ ಸದ್ದಿಲ್ಲದೇ ಭಾರತಕ್ಕೆ ಬಂದು, ತನ್ನ ತಂದೆಯನ್ನು ಭೇಟಿ ಮಾಡಿ ವಾಪಸ್ ಹೋಗಿರುವ ಸ್ಫೋಟಕ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.

ಸುಲಿಗೆ ಪ್ರಕರಣವೊಂದರ ಸಂಬಂಧ ದಾವೂದ್ ಸೋದರ ಇಕ್ಬಾಲ್ ಕಸ್ಕರ್‌ನನ್ನು ಬಂಧಿಸಿರುವ ಪೊಲೀಸರು, ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಮಾಹಿತಿ ತಿಳಿದುಬಂದಿದೆ.

ದಾವೂದ್ ಪತ್ನಿ ಮೆಹಜಬೀನ್ ಶೇಖ್ ಅಲಿಯಾಸ್ ಜುಬೀನಾ ಜರೀನ್ ಕಳೆದ ವರ್ಷ ಮುಂಬೈಗೆ ಬಂದಿದ್ದಳು. ಮುಂಬೈನಲ್ಲಿ ಕುಟುಂಬ ಸಮೇತ ವಾಸಿಸುತ್ತಿರುವ ತನ್ನ ತಂದೆ ಸಲೀಂ ಕಾಶ್ಮೀರಿಯನ್ನು ಭೇಟಿ ಮಾಡಿದ್ದಳು. ಕುಟುಂಬ ಸದಸ್ಯರ ಜತೆಗೂ ಇದ್ದಳು. ಬಳಿಕ ರಹಸ್ಯವಾಗಿ ದೇಶದಿಂದ ವಾಪಸ್ ಹೋದಳು ಎಂದು ಆತ ಹೇಳಿದ್ದಾನೆ.

ದಾವೂದ್ ಹಾಗೂ ಆತನ ಪರಿವಾರದ ಚಲನವಲನಗಳ ಮೇಲೆ ಬೇಹುಗಾರಿಕಾ ಸಂಸ್ಥೆಗಳು ತೀವ್ರ ನಿಗಾ ಇಟ್ಟಿರುವ ಹೊರತಾಗಿಯೂ ನಡೆದಿರುವ ಈ ಬೆಳವಣಿಗೆ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಮುಂಬೈ ಪೊಲೀಸರು ದಾವೂದ್ ಕುಟುಂಬ ಸದಸ್ಯರ ಮೇಲೆ ಹದ್ದಿನಗಣ್ಣು ಇಟ್ಟಿದ್ದಾರೆ. ಅವರೆಲ್ಲರ ಕಣ್ತಪ್ಪಿಸಿ ಮೆಹಜಬೀನ್ ಮುಂಬೈಗೆ ಬಂದು ಹೋಗಿರುವುದು ಭಾರಿ ಅಚ್ಚರಿ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉಡುದಾರ, ಶಿವನ ಟಿ ಶರ್ಟ್ ಧರಿಸಿದ ಕಾರಣ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಮೇಲೆ ಭೀಕರ ದಾಳಿ
ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು