
ಧರ್ಮಶಾಲಾ(ಮಾ.19): ನನ್ನ ಉತ್ತರಾಧಿಕಾರಿ ಬಹುಶಃ ಭಾರತೀಯನಾಗಿರಬಹುದು ಎಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಹೇಳಿದ್ದಾರೆ.
'ನನ್ನ ಸಾವಿನ ಬಳಿಕ ನಾನು ಭಾರತದಲ್ಲೇ ಮರುಹುಟ್ಟು ಪಡೆಯುತ್ತೇನೆ ಎಂದಿರುವ ದಲೈ ಲಾಮಾ, ಒಂದು ವೇಳೆ ನನ್ನ ಸಾವಿನ ಬಳಿಕ ಚೀನಾ ಹೊಸ ಧರ್ಮಗುರು ನೇಮಕ ಮಾಡಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಭವಿಷ್ಯದಲ್ಲಿ ಭಾರತೀಯ ಬೌದ್ಧಗುರುವೋರ್ವರು ಧರ್ಮಶಾಲಾದ ಜವಾಬ್ದಾರಿ ಹೊರಬಹುದು. ಇದು ತಮ್ಮ ಆಶಯ ಕೂಡ ಎಂದು ಟಿಬೆಟ್ನ ರಾಜಧಾನಿ ಲಾಸಾದಿಂದ ಭಾರತಕ್ಕೆ ಶರಣಾರ್ಥಿಯಾಗಿ ಬಂದ 60ನೇ ವರ್ಷಾಚರಣೆ ವೇಳೆ ದಲೈ ಲಾಮಾ ಹೇಳಿದ್ದಾರೆ.
1935ರಲ್ಲಿ ಜನಿಸಿದ 14ನೇ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರನ್ನು ತಮ್ಮ ಪೂರ್ವಿಕ ಧರ್ಮಗುರುಗಳ ಪುರ್ನಜನ್ಮ ಎಂದೇ ಭಾವಿಸಲಾಗುತ್ತದೆ. ಇನ್ನು ದಲೈ ಲಾಮಾ ಅವರ ಹೇಳಿಕೆಯಿಂದ ಚೀನಾಗೆ ಮುಜುಗರವಾಗಿದ್ದು, ತನ್ನ ಭವಿಷಸ್ಯದ ಯೋಜನೆಗೆ ಈಗಲೇ ಅಡ್ಡಗಾಲು ಹಾಕಿದ ಧರ್ಮಗುರು ಬಗ್ಗೆ ಅಸಮಾಧಾನ ಹೊರಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.