ದಾಬೋಲ್ಕರ್ ಹತ್ಯೆ: 2006 ರ ಕೋಮುಗಲಭೆಯಲ್ಲಿ ಸನಾತನ ಸಂಸ್ಥೆ ಕೈವಾಡ?

Published : Oct 05, 2016, 11:30 AM ISTUpdated : Apr 11, 2018, 12:36 PM IST
ದಾಬೋಲ್ಕರ್ ಹತ್ಯೆ: 2006 ರ ಕೋಮುಗಲಭೆಯಲ್ಲಿ ಸನಾತನ ಸಂಸ್ಥೆ ಕೈವಾಡ?

ಸಾರಾಂಶ

ಮುಂಬೈ (ಸೆ.05): ಕೊಲ್ಹಾಪುರದ ಹಿಂದೂ ದೇವಾಲಯದಲ್ಲಿ ಕಾಶ್ಮೀರದ ಜಿಹಾದಿ ಉಗ್ರಗಾಮಿಗಳ ಬಗ್ಗೆ ಪ್ರಚೋದನಾತ್ಮಕ ಕರಪತ್ರಗಳನ್ನು ಸನಾತನ ಸಂಸ್ಥೆ ಹಂಚಿದೆ ಎನ್ನುವ ಮಾಹಿತಿಯನ್ನು ಸಿಬಿಐ ಬಹಿರಂಗಪಡಿಸಿದೆ.

ನರೇಂದ್ರ ದಾಬೋಲ್ಕರ್ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವ ಸಂದರ್ಭದಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದ್ದು, ದಾಬೋಲ್ಕರ್ ಹತ್ಯೆ ಚಾರ್ಜ್’ಶೀಟಲ್ಲಿ ಸಿಬಿಐ ಈ ಅಂಶವನ್ನು ಸೇರಿಸಿದೆ.

2006 ರಲ್ಲಿ ನಡೆದ ಕೋಮುಗಲಭೆಯಲ್ಲಿ ಹಿಂದೂ-ಮುಸ್ಲೀಂ ಧರ್ಮದವರನ್ನು ಪ್ರಚೋದಿಸಲು ಸನಾತನ ಸಂಸ್ಥೆಯವರು ಹಿಂದೂ ದೇವಾಲಯದಲ್ಲಿ ಪ್ರಚೋದನಾತ್ಮಕ ಕರಪತ್ರ ಹಂಚಿದೆ ಎಂದು ಸಿಬಿಐ ಹೇಳಿದೆ.

ದಾಬೋಲ್ಕರ್ ಹತ್ಯೆ ನಡೆದಾಗ ಸನಾತನ ಸಂಸ್ಥೆಯ ಮುಖ್ಯಸ್ಥ ಡಾ.ವೀರೇಂದ್ರ ತಾವಡೆಯವರನ್ನು ಬಂಧಿಸಲಾಗಿತ್ತು. ಇವರ ಜೊತೆ ವಿನಯ್ ಪವಾರ್, ಸಾರಂಗ್ ಅಕೋಲ್ಕರ್ ಹೆಸರು ಕೇಳಿಬಂದಿತ್ತು.

ಕೊಲ್ಹಾಪುರ ಮೂಲದ ಇರ್ಫಾನ್ ಅತ್ತಾರ್ ಎನ್ನುವ ವ್ಯಕ್ತಿ ಕಾಶ್ಮೀರದಲ್ಲಿ ಜಿಹಾದಿ ಉಗ್ರಗಾಮಿಗಳ ತಂಡವನ್ನು ಸೇರಿದ್ದ. ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದ. ಆಗ ಇರ್ಫಾನ್ ಅಮರ್ ರಹೆ ಎನ್ನುವ ಕರಪತ್ರವನ್ನು ಹಿಂದೂ ದೇವಾಲಯದಲ್ಲಿ ಅಂಟಿಸಿ ಕೋಮುಗಲಭೆ ಉರಿ ಹೊತ್ತಿಕೊಳ್ಳಲು ಸನಾತನ ಸಂಸ್ಥೆ ಪ್ರಚೋದಿಸಿತ್ತು ಎಂದು ಸಿಬಿಐ ಹೇಳಿದೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಮಹಿಳೆಯರು ಇರೋದು ಗಂಡನ ಜೊತೆ ಮಲಗೋಕೆ ಮಾತ್ರ..' ವಿಜಯೋತ್ಸವ ಭಾಷಣದಲ್ಲಿ ಸಿಪಿಎಂ ನಾಯಕನ ವಿವಾದಿತ ಮಾತು
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ