ಅಬ್ಬರಿಸಲು ಸಜ್ಜಾಗಿದೆ ಮತ್ತೊಂದು ಚಂಡಮಾರುತ

Published : May 23, 2018, 02:03 PM ISTUpdated : May 24, 2018, 03:07 PM IST
ಅಬ್ಬರಿಸಲು ಸಜ್ಜಾಗಿದೆ ಮತ್ತೊಂದು ಚಂಡಮಾರುತ

ಸಾರಾಂಶ

ಸಾಗರ್ ಚಂಡಮಾರುತದ ಅಬ್ಬರ ತಗ್ಗುತ್ತಿದ್ದಂತೆ ಇದೀಗ ಮತ್ತೊಂದು ಚಂಡಮಾರುತ ಮಿಕುನು ಅಬ್ಬರ ತೋರಲು  ಸಜ್ಜಾಗಿದೆ. ಅರಬ್ಬಿ ಸಮುದ್ರದ ಮೂಲಕ ಚಂಡಮಾರುತವು ಹಾದು ಹೋಗಲಿದ್ದು, ಇದರಿಂದ ಭಾರತದ ವಿವಿಧ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. 

ನವದೆಹಲಿ : ಸಾಗರ್ ಚಂಡಮಾರುತದ ಅಬ್ಬರ ತಗ್ಗುತ್ತಿದ್ದಂತೆ ಇದೀಗ ಮತ್ತೊಂದು ಚಂಡಮಾರುತ ಮಿಕುನು ಅಬ್ಬರಿಸಲು ಸಜ್ಜಾಗಿದೆ.  ಅರಬ್ಬಿ ಸಮುದ್ರದ ಮೂಲಕ ಚಂಡಮಾರುತವು ಹಾದು ಹೋಗಲಿದ್ದು, ಇದರಿಂದ ಭಾರತದ ವಿವಿಧ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. 
 
ಲಕ್ಷದ್ವೀಪ, ಭಾರತೀಯ ಕರಾವಳಿ ಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳು ಈ ಚಂಡ ಮಾರುತದ ಅಬ್ಬರಕ್ಕೆ ಸಿಲುಕಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇದರಿಂದ ಶನಿವಾರದವರೆಗೂ ಕೂಡ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚಂಡ ಮಾರುತವು ಕೇರಳದಲ್ಲಿ ಕೂಡ ತನ್ನ ಅಬ್ಬರ ತೋರಲಿದ್ದು,  ಬೆಂಗಳೂರಿನಲ್ಲಿಯೂ ಕೂಡ ಚಂಡಮಾರುತದ ಪರಿಣಾಮ ಕಂಡು ಬರಲಿದೆ. 

ಮೇ 23 ರಿಂದ ಮೇ 26ರವರೆಗೆ ಚಂಡಮಾರುತದ ಅಬ್ಬರ ಇರಲಿದ್ದು, ಅತ್ಯಂತ ವೇಗವಾಗಿ ಗಾಳಿ ಬೀಸಲಿದೆ.  ಇದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆಯೂ ಮುನ್ಸೂಚನೆಯನ್ನು  ನೀಡಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ