ಮಾಲೆಗಾಂವ್ ಸ್ಫೋಟ: ಶಂಕಿತ ಉಗ್ರ ಪುರೋಹಿತ್'ಗೆ ಜಾಮೀನು ನಿರಾಕರಣೆ

Published : Sep 26, 2016, 12:52 PM ISTUpdated : Apr 11, 2018, 12:58 PM IST
ಮಾಲೆಗಾಂವ್ ಸ್ಫೋಟ: ಶಂಕಿತ ಉಗ್ರ ಪುರೋಹಿತ್'ಗೆ ಜಾಮೀನು ನಿರಾಕರಣೆ

ಸಾರಾಂಶ

ಮುಂಬೈ (ಸೆ.26): 2008 ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮುಂಬೈಯ ವಿಶೇಷ ನ್ಯಾಯಾಲಯವು ಶಂಕಿತ ಉಗ್ರ ಮಾಜಿ ಸೇನಾ ಅಧಿಕಾರಿ ಲೆ.ಕ. ಪ್ರಸಾದ್ ಶ್ರೀಕಾಂತ್ ಪುರೋಹಿತ್’ನ ಜಾಮೀನು ಅರ್ಜಿಯನ್ನು ನಿರಾಕರಿಸಿದೆ.

ತನ್ನ ಜಾಮೀನು ಅರ್ಜಿಯಲ್ಲಿ ಪುರೋಹಿತ್, ಅಭಿನವ ಭಾರತ್ ಟ್ರಸ್ಟ್’ಅನ್ನು ರಾಜಕೀಯ ಪಕ್ಷವಾಗಿ ನೊಂದಾಯಿಸಲು ಸ್ಥಾಪಿಸಲಾಗಿತ್ತು ಹಾಗೂ ಹಿರಿಯ ಸೇನಾಧಿಕಾರಿಗಳನ್ನು ಕೂಡಾ ಸಂಪರ್ಕದಲ್ಲಿಸಲಾಗಿತ್ತು ಎಂದು ಹೇಳಿದ್ದಾನೆ.

ಸ್ಫೋಟ ನಡೆಸಲು ಬೇಕಾಗಿರುವ ಶಸ್ತ್ರಾಸ್ತ್ರಗಳು ಹಾಗೂ ಸಾಮಾಗ್ರಿಗಳನ್ನು ಅಭಿನವ ಭಾರತ್ ಸಂಸ್ಥೆಯು ಸಂಗ್ರಹಿಸಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಏ)ಯು ಹೇಳಿದೆ.

ಸೇನೆಯ ಸೇವೆಯಲ್ಲಿದ್ದು ಪುರೋಹಿತ್ ಸೇನೆಯ ನಿಯಮಗಳನ್ನು ಉಲ್ಲಂಘಿಸಿ 2006ರಲ್ಲಿ ಸಂಘಟನೆಯನ್ನು ರಚಿಸಿದ್ದಾನೆಂದು ಎನ್ಐಏ ಹೇಳಿತ್ತು.  ಪುರೋಹಿತ್ ಆ ಬಳಿಕ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಆ ಸಂಘಟನೆ ಹೆಸರಿನಲ್ಲಿ ಹಣವನ್ನು ಕೂಡಾ ಸಂಗ್ರಹಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ದೇಶದಲ್ಲಿ ದೇವರಿಗೇ ಜಾಗವಿಲ್ಲ; ಬೈಬಲ್, ಕುರಾನ್ ಸಿಕ್ಕರೆ ನೇರ ಜೈಲು, ಮರಣದಂಡನೆ!
ಟ್ರಾಫಿಕ್ ದಂಡ ಇನ್ನೂ ಕಟ್ವಿಲ್ವಾ? ಹೀಗೆ ಭಾರತದಲ್ಲಿ ಬಾಕಿ ಉಳಿದಿರುವ ಮೊತ್ತ 39000 ಕೋಟಿ ರೂ