
ಬೆಂಗಳೂರು : ನಾಮಪತ್ರ ಸಲ್ಲಿಕೆ ಪೂರ್ಣಗೊಂಡು ಪ್ರಚಾರದ ಭರಾಟೆ ತಾರಕಕ್ಕೇರಿರುವ ಸಂದರ್ಭದಲ್ಲಿ ಕಣದಲ್ಲಿರುವ ಯಾರಾದರೂ ಅಭ್ಯರ್ಥಿ ಮೃತಪಟ್ಟರೆ ಚುನಾವಣೆಯನ್ನೇ ಮುಂದೂಡಲಾಗುತ್ತದೆ.
2013ರಲ್ಲಿ ಪಿರಿಯಾಪಟ್ಟಣದಲ್ಲೂ ಇದೇ ರೀತಿ ಆಗಿತ್ತು. ಈ ಸಂಪ್ರದಾಯ ಶುರುವಾಗಿದ್ದು ಚನ್ನಗಿರಿ ಕ್ಷೇತ್ರದಿಂದ. 1957ರ ಚುನಾವಣೆಗೆ ಕಾಂಗ್ರೆಸ್ಸಿಂದ ಕುಂದೂರು ರುದ್ರಪ್ಪ, ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಎಂ.ಎಸ್. ಪಾಪಣ್ಣ ಸ್ಪರ್ಧೆ ಮಾಡಿದ್ದರು.
ಮತದಾನಕ್ಕೆ 8-10 ದಿನ ಬಾಕಿ ಇರುವಾಗ ಪಾಪಣ್ಣ ನಿಧನರಾದರು. ಹೀಗಾಗಿ ರುದ್ರಪ್ಪ ಅವಿರೋಧ ಆಯ್ಕೆಯಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ, ಅಭ್ಯರ್ಥಿ ಮೃತಪಟ್ಟರೆ ಚುನಾವಣೆ ಮುಂದೂಡುವ ಸಂಬಂಧ ನಿಯಮಕ್ಕೆ ತಿದ್ದುಪಡಿ ಮಾಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.