ಪತ್ರಕರ್ತನ ಥಳಿಸಿದ ಪೇದೆ, ಹೊಯ್ಸಳ ಚಾಲಕ ಸಸ್ಪೆಂಡ್‌

Published : Nov 12, 2016, 07:44 AM ISTUpdated : Apr 11, 2018, 12:58 PM IST
ಪತ್ರಕರ್ತನ ಥಳಿಸಿದ ಪೇದೆ, ಹೊಯ್ಸಳ ಚಾಲಕ ಸಸ್ಪೆಂಡ್‌

ಸಾರಾಂಶ

ಒಳ­ಚರಂ­ಡಿ ನೀರು ಹರಿಯುತ್ತಿದ್ದ ದೃಶ್ಯವನ್ನು ಅಂಗ್ಲ ಪತ್ರಿಕೆ ವರದಿಗಾರ ಕ್ಯಾಮೆರಾದಲ್ಲಿ ಸೆರೆ ಹಿಡಿ­ಯುತ್ತಿದ್ದರು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಹೊಯ್ಸಳ ವಾಹನದ  ಪೇದೆಯೊಬ್ಬರು ಫೋಟೋ ತೆಗೆಯ­ದಂತೆ ವರದಿಗಾರನಿಗೆ ಸೂಚಿ­ಸಿ­­ದ್ದಾರೆ.

ಬೆಂಗಳೂರು (ನ.12): ಘಟನೆಯೊಂದರ ವರದಿಗೆ ತೆರಳಿದ್ದ ಆಂಗ್ಲ ಪತ್ರಿಕೆಯ ವರದಿಗಾರನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಪೊಲೀಸ್‌ ಪೇದೆ, ಹೊಯ್ಸಳ ವಾಹನ ಚಾಲಕರೊಬ್ಬರನ್ನು ಅಮಾನತು ಮಾಡಿ ನಗರ ಪೊಲೀಸ್‌ ಆಯುಕ್ತ ಮೇಘರಿಕ್‌ ಅವರು ಆದೇಶಿಸಿದ್ದಾರೆ. ಆಲ್ಲದೆ,ಇಲಾಖಾ ತನಿಖೆಗೂ ಸೂಚಿಸಿದ್ದಾರೆ.

ಏನಾಯ್ತು?: ಶುಕ್ರವಾರ ಬಾಣಸ­ವಾಡಿ ಮುಖ್ಯರಸ್ತೆಯಲ್ಲೇ ಒಳ­ಚರಂ­ಡಿ ನೀರು ಹರಿಯುತ್ತಿದ್ದನ್ನು ಒಂದಷ್ಟುಮಂದಿ ನಿಂತು ನೋಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಂಗ್ಲ ಪತ್ರಿಕೆ ವರದಿಗಾರ, ಕ್ಯಾಮೆರಾದಲ್ಲಿ ದೃಶ್ಯ ಸೆರೆ ಹಿಡಿ­ ಯುತ್ತಿದ್ದರು. ಅಷ್ಟೊತ್ತಿಗೆ ಹೊಯ್ಸಳ ವಾಹನವೂ ಸ್ಥಳಕ್ಕೆ ಬಂದಿದೆ. ಈ ವೇಳೆ ಪೇದೆಯೊಬ್ಬರು ಫೋಟೋ ತೆಗೆಯ­ದಂತೆ ವರದಿಗಾರನಿಗೆ ಸೂಚಿ­ಸಿ­­ದ್ದಾರೆ.

ನಂತರ ಅಲ್ಲಿಂದ ಹೊರಡು­ತ್ತಿದ್ದ ವರ­ದಿಗಾರನನ್ನು ತಡೆದು ಪೇದೆ ಲಾಠಿ­ಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ವಾಹನಕ್ಕೆ ಕೂರಿಸಿಕೊಂಡು ಒಂದಷ್ಟು ದೂರ ಹೋಗಿದ್ದಾರೆ. ನಂತರ ರಸ್ತೆ ಮಧ್ಯೆ ಬಿಟ್ಟು ಹೋಗಿ­ದ್ದಾರೆ. ಘಟನೆ ಬಗ್ಗೆ ವರದಿಗಾರ ಪೂರ್ವ ವಿಭಾಗದ ಡಿಸಿಪಿ ಸತೀಶ್‌ ಅವರಿಗೆ ದೂರು ನೀಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2025ರ ಪ್ರವಾಸೋದ್ಯಮದಲ್ಲಿ ಬೆಂಗಳೂರು ದರ್ಬಾರ್: ಬಿಸಿನೆಸ್, ವಿರಾಮಕ್ಕೆ ಪ್ರವಾಸಿಗರ ಮೊದಲ ಆಯ್ಕೆ ಸಿಲಿಕಾನ್ ಸಿಟಿ!
ತಿರುಪತಿ ತಿಮ್ಮಪ್ಪನಿಗೆ 1.2 ಕೋಟಿ ರೂಪಾಯಿ ಮೌಲ್ಯದ ಬ್ಲೇಡ್‌ ದಾನ ಮಾಡಿದ ಹೈದರಾಬಾದ್‌ ಉದ್ಯಮಿ