ಬಾವಿಯೊಳಕ್ಕೆ ಹೊಕ್ಕರೂ ಪೊಲೀಸರು ಬಿಡಲಿಲ್ಲ

Published : Aug 17, 2017, 11:50 PM ISTUpdated : Apr 11, 2018, 12:39 PM IST
ಬಾವಿಯೊಳಕ್ಕೆ ಹೊಕ್ಕರೂ ಪೊಲೀಸರು ಬಿಡಲಿಲ್ಲ

ಸಾರಾಂಶ

ಆರಕ್ಷಕ ವಾಹನದ ಶಬ್ದ ಕೇಳಿಸಿಕೊಂಡ ಈ ಇಬ್ಬರು ಕಳ್ಳರು ಓಡಲು ಶುರು ಮಾಡಿದ್ದಾರೆ.

ಧಾರವಾಡ(ಆ.17): ಇಲ್ಲಿನ ವಿದ್ಯಾಗಿರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಲು ಬಂದು ಪರಾರಿಯಾಗುತ್ತಿದ್ದ ಚೋರರನ್ನು ಪೊಲೀಸರು ಸಿನೀಮಿಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.

ಪಟ್ಟಣದ ಮಹಿಷಿ ರಸ್ತೆಯಲ್ಲಿರುವ ರಶ್ಮಿ ಜೋಷಿ ಅವರ ಮನೆಗೆ ನಿನ್ನೆ ರಾತ್ರಿ 1.30 ಗಂಟೆಗೆ ಆಗಮಿಸಿದ ಇಬ್ಬರು ಕಳ್ಳರು ಮನೆಯ ಮೇಲ್ಛಾವಣಿಯಲ್ಲಿ ಅಳವಡಿಸಿದ್ದ ಸೋಲಾರ್​ ಪ್ಯಾನೆಲ್​ನಲ್ಲಿಯ ವಿದ್ಯುತ್​ ತಂತಿಯನ್ನು ಕದಿಯುತ್ತಿದ್ದಾಗ ಜಗರೂಕರಾದ ಮಾಲೀಕ ರಶ್ಮಿ ಜೋಷಿ ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೆಲವೇ ಕ್ಷಣದಲ್ಲಿ ಪೊಲೀಸರು ಆಗಮಿಸಿದರು. ಆರಕ್ಷಕ ವಾಹನದ ಶಬ್ದ ಕೇಳಿಸಿಕೊಂಡ ಈ ಇಬ್ಬರು ಕಳ್ಳರು ಓಡಲು ಶುರು ಮಾಡಿದ್ದಾರೆ.

ಓಡುತ್ತಾ ಹತ್ತಿರದಲ್ಲಿದ್ದ ಬಾವಿಗೆ ಜಿಗಿದಿದ್ದಾರೆ. ಬಾವಿಯೊಳಗೋದರೂ ಬಿಡದ ಪೊಲೀಸರು ಇಬ್ಬರನ್ನು ಬಂಧಿಸಿ ಸೆರೆಮನೆಗೆ ತಳ್ಳಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌