ಎಲ್ಲ ಹಾಲಿ ಶಾಸಕರಿಗೆ ಟಿಕೆಟ್‌ ಕೊಡಿ: ಖರ್ಗೆ

Published : Mar 15, 2018, 08:23 AM ISTUpdated : Apr 11, 2018, 12:36 PM IST
ಎಲ್ಲ ಹಾಲಿ ಶಾಸಕರಿಗೆ ಟಿಕೆಟ್‌ ಕೊಡಿ: ಖರ್ಗೆ

ಸಾರಾಂಶ

ಎರಡು ಬಾರಿ ಸತ​ತ​ವಾಗಿ ಶಾಸ​ಕ​ರಾಗಿ ಆಯ್ಕೆ​ಯಾ​ದ​ವ​ರಿಗೆ ನೇರ​ವಾಗಿ ಟಿಕೆಟ್‌ ಖಾತರಿಗೊಳಿ​ಸಬೇಕು ಮತ್ತು ಬಹು​ತೇಕ ಎಲ್ಲಾ ಹಾಲಿ ಶಾಸ​ಕ​ರಿಗೆ ಟಿಕೆಟ್‌ ನೀಡುವುದು ಸೂಕ್ತ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಮಲ್ಲಿ​ಕಾ​ರ್ಜುನ ಖರ್ಗೆ ಸಲಹೆ ನೀಡಿ​ದ್ದಾ​ರೆ ಎಂದು ತಿಳಿದು ಬಂದಿ​ದೆ.

ಬೆಂಗಳೂರು : ಎರಡು ಬಾರಿ ಸತ​ತ​ವಾಗಿ ಶಾಸ​ಕ​ರಾಗಿ ಆಯ್ಕೆ​ಯಾ​ದ​ವ​ರಿಗೆ ನೇರ​ವಾಗಿ ಟಿಕೆಟ್‌ ಖಾತರಿಗೊಳಿ​ಸಬೇಕು ಮತ್ತು ಬಹು​ತೇಕ ಎಲ್ಲಾ ಹಾಲಿ ಶಾಸ​ಕ​ರಿಗೆ ಟಿಕೆಟ್‌ ನೀಡುವುದು ಸೂಕ್ತ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಮಲ್ಲಿ​ಕಾ​ರ್ಜುನ ಖರ್ಗೆ ಸಲಹೆ ನೀಡಿ​ದ್ದಾ​ರೆ ಎಂದು ತಿಳಿದು ಬಂದಿ​ದೆ.

ಬುಧ​ವಾರ ನಡೆದ ಕಾಂಗ್ರೆಸ್‌ ಚುನಾ​ವಣೆ ಸಮಿತಿ ಸಭೆ​ಯಲ್ಲಿ ಮಾತ​ನಾ​ಡಿದ ಅವರು, ಪ್ರಸ್ತುತ ರಾಜ್ಯದಲ್ಲಿ ಆಡ​ಳಿತ ವಿರೋಧಿ ಅಲೆ​ಯಿಲ್ಲ. ಆದರೆ, ಟಿಕೆಟ್‌ ಹಂಚಿ​ಕೆ​ಯಲ್ಲಿ ಗೊಂದಲ ಮಾಡಿ​ಕೊಂಡರೆ ಆಂತ​ರಿ​ಕ​ವಾ​ಗಿಯೇ ವಿರೋಧಿ ಅಲೆ ಸೃಷ್ಟಿ​ಯಾ​ಗು​ತ್ತದೆ. ಇದು ಆಗ​ದಂತೆ ಎಚ್ಚ​ರಿಕೆ ವಹಿ​ಸ​ಬೇಕು. ಹಾಲಿ ಶಾಸಕರು ಗೆಲ್ಲಲಿ ಅಥವಾ ಸೋಲಲಿ, ಅವರಿಗೆ ಟಿಕೆಟ್‌ ನೀಡಲೇಬೇಕಾಗುತ್ತದೆ. ಒಂದು ವೇಳೆ ಇವರು ಬಂಡಾ​ಯ​ವೆ​ದ್ದರೆ ಪಕ್ಷ ಗೆಲ್ಲುವ ಸಾಧ್ಯ​ತೆಯೂ ಇಲ್ಲ​ವಾ​ಗು​ತ್ತದೆ ಎಂದು ಸಲಹೆ ನೀಡಿ​ದರು ಎನ್ನ​ಲಾ​ಗಿ​ದೆ.

ಈ ವೇಳೆ ಕೆಪಿ​ಸಿಸಿ ಅಧ್ಯ​ಕ್ಷ ಡಾ

ಜಿ.ಪರ​ಮೇ​ಶ್ವರ್‌ ಅವರು, ಕಳೆದ ಬಾರಿ ಗೆದ್ದ ಶಾಸ​ಕರ ಜತೆಗೆ, ಗೆಲ್ಲುವ ಹಂತದಲ್ಲಿ ಎಡ​ವಿ​ದ​ವ​ರಿಗೂ ಒಂದು ಅವ​ಕಾಶ ದೊರೆ​ಯ​ಬೇಕು ಎಂದು ವಾದಿ​ಸಿ​ದರು ಎನ್ನ​ಲಾ​ಗಿದೆ. ಈ ಸಂದ​ರ್ಭ​ದಲ್ಲಿ ಮಧ್ಯ​ಪ್ರ​ವೇ​ಶಿ​ಸಿದ ರಾಜ್ಯ ಉಸ್ತು​ವಾರಿ ಕೆ.ಸಿ.ವೇಣುಗೋಪಾಲ್‌, ಸದ್ಯ ಪಕ್ಷದ ಹಾಲಿ ಶಾಸಕರಿಗೆ ಟಿಕೆಟ್‌ ನೀಡುವ ವಿಚಾರದ ಬಗ್ಗೆ ಚರ್ಚೆ ಮಾಡು​ವುದು ಬೇಡ ಎಂದಾ​ಗ ಸಹಮತ ವ್ಯಕ್ತ​ಪ​ಡಿ​ಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಮುಂದಿನ ಸಭೆ​ಯಲ್ಲಿ ತೀರ್ಮಾನ ಮಾಡೋಣ ಎಂದು ಚರ್ಚೆಗೆ ತೆರೆ ಎಳೆ​ದರು ಎಂದು ಮೂಲ​ಗಳು ತಿಳಿ​ಸಿ​ವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಹಳದಿ ಮಾರ್ಗದ ಮೆಟ್ರೋ ನಿಲ್ದಾಣಗಳ ಬಳಿ, 6 ಹೊಸ ಬಿಎಂಟಿಸಿ ಬಸ್ ತಂಗುದಾಣಗಳ ಸ್ಥಾಪನೆ!
ಅಂಬಾನಿ ಅಳಿಯನಿಗೆ ಯಾಕೆ ಬಂತು ಇಂಥಾ ಸ್ಥಿತಿ, ಶ್ರೀರಾಮ್‌ ಲೈಫ್‌ ಇನ್ಶುರೆನ್ಸ್‌ ಪಾಲು ಮಾರಾಟಕ್ಕೆ ನಿರ್ಧಾರ!