ಚುನಾವಣಾ ಪ್ರಣಾಳಿಕೆಯಿಂದ ಮದ್ಯ ನಿಷೇಧ ಕೈ ಬಿಟ್ಟ ಸಿಎಂ

Published : Apr 03, 2018, 09:12 PM ISTUpdated : Apr 14, 2018, 01:13 PM IST
ಚುನಾವಣಾ ಪ್ರಣಾಳಿಕೆಯಿಂದ ಮದ್ಯ ನಿಷೇಧ ಕೈ ಬಿಟ್ಟ ಸಿಎಂ

ಸಾರಾಂಶ

ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಲು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.  ನಾವು  ಅಧಿಕಾರಕ್ಕೆ ಬಂದರೆ  ಮದ್ಯ ನಿಷೇಧ ಮಾಡಲು ನಾವು ಮುಂದಾಗಲ್ಲ ಎನ್ನುವ ಮೂಲಕ  ಮದ್ಯ ನಿಷೇಧ ಮಾಡುವಂತೆ ಬಂದಿರುವ  ಪ್ರಸ್ತಾಪವನ್ನು  ಕಾಂಗ್ರೆಸ್  ತಳ್ಳಿ ಹಾಕಿದೆ. 

ಬೆಂಗಳೂರು (ಏ. 03): ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಲು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.  ನಾವು  ಅಧಿಕಾರಕ್ಕೆ ಬಂದರೆ  ಮದ್ಯ ನಿಷೇಧ ಮಾಡಲು ನಾವು ಮುಂದಾಗಲ್ಲ ಎನ್ನುವ ಮೂಲಕ  ಮದ್ಯ ನಿಷೇಧ ಮಾಡುವಂತೆ ಬಂದಿರುವ  ಪ್ರಸ್ತಾಪವನ್ನು  ಕಾಂಗ್ರೆಸ್  ತಳ್ಳಿ ಹಾಕಿದೆ. 

ಬಿಹಾರ ಮಾದರಿಯಲ್ಲಿ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ ರಾಜ್ಯ ಬಿಜೆಪಿ ನಾಯಕರು.  ವೀರಪ್ಪ ಮೊಯ್ಲಿ ನೇತೃತ್ವದ ಪ್ರಣಾಳಿಕಾ ಸಮಿತಿ ಮುಂದೆ ಮಾಡಲಾಗಿರುವ  ಮಧ್ಯ ನಿಷೇಧ  ಪ್ರಸ್ತಾಪವನ್ನು ತಳ್ಳಿ ಹಾಕಿದ್ದಾರೆ. 
ಪ್ರಸ್ತಾಪ ಒಪ್ಪಿಕೊಂಡರೆ 18 ಸಾವಿರ ಕೋಟಿ ರೂಪಾಯಿ ಪ್ರತಿ ವರ್ಷ ನಷ್ಟವಾಗುತ್ತದೆ ಎಂದು   ಪ್ರಣಾಳಿಕೆ ಸಮಿತಿ ಮುಂದೆ  ಸಿಎಂ ಸಿದ್ದರಾಮಯ್ಯ ತಮ್ಮ ವಾದ ಮಂಡಿಸಿದ್ದಾರೆ. ಸಿಎಂ ವಿವರಣೆಗೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕಾ ಸಮಿತಿ ಒಪ್ಪಿಗೆ ನೀಡಿದೆ. 

ಇಷ್ಟೆಲ್ಲಾ ನಷ್ಟ ಮಾಡಿಕೊಂಡು ಮದ್ಯ ನಿಷೇಧ ಮಾಡಲು ಸಾಧ್ಯವಾಗುವುದಿಲ್ಲ.  ಮದ್ಯ ನಿಷೇಧ ಪ್ರಸ್ತಾಪವನ್ನು  ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸೋದು ಬೇಡ ಎಂದು ಸಿಎಂ ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ