
ನವದೆಹಲಿ(ಜು.4): ಭಾರತದ ಆರ್ಥಿಕತೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಶಶಿ ತರೂರ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತರೂರ್ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದು, ಡಾಕ್ಟರ್ವೋರ್ವ ತನ್ನ ರೋಗಿಗೆ ನಿನ್ನ ಬೆನ್ನ ಮೂಳೆಯನ್ನು ಫೋಟೋ ಶಾಪ್ ಮೂಲಕ ಸರಿ ಮಾಡಿರುವುದಾಗಿ ಹೇಳುತ್ತಿರುವ ಫೋಟೋ ಹಾಕಿದ್ದಾರೆ.
ಅಂದರೆ ಬಿಜೆಪಿ ಸರ್ಕಾರ ಕೂಡ ಹದಗೆಟ್ಟಿರುವ ಆರ್ಥಿಕ ಸ್ಥಿತಿಯನ್ನು ಮುಚ್ಚಿಟ್ಟುಕೊಳ್ಳಲು, ಸದೃಢ ಆರ್ಥಿಕತೆ ಎಂಬ ನಾಟಕವಾಡುತ್ತಿದೆ ಎಂದು ತರೂರ್ ಆಪಾದಿಸಿದ್ದಾರೆ. ಇದಕ್ಕೆ ಸಾಕಷ್ಟು ಜನ ಕಮೆಂಟ್ ಮಾಡಿದ್ದು, ಕೆಲವರು ಶಶಿ ತರೂರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರಂತೆ ಆಡಬೇಡಿ ಎಂದು ಶಶಿ ತರೂರರ್ಗೆ ಕೆಲವರು ತಮಾಷೆಯ ಸಲಹೆ ನೀಡಿದ್ದಾರೆ. ಕಾಂಗ್ರೆಸ್ ದೇಶದ ಆರ್ಥಿಕತೆಯನ್ನು ಅದೆಷ್ಟು ಹದಗೆಡಿಸಿದೆ ಎಂಬುದು ಶಶಿ ತರೂರ್ ಅವರಿಗೂ ಗೊತ್ತು, ಆದರೂ ಅವರು ರಾಹುಲ್ ಗಾಂಧಿಯ ಹಾಗೆ ಪೆದ್ದನಂತೆ ಆಡುತ್ತಿದ್ದಾರೆ ಎಂದು ಕೆಲವರು ತರೂರ್ ಕಾಲೆಳೆದಿದ್ದಾರೆ.
ಇನ್ನೂ ಕೆಲವರು ಮುಂದಿನ ಪ್ರಧಾನಮಂತ್ರಿ ನೀವೇ ಎಂದು ಘೋಷಿಸಿಕೊಂಡು ಬಿಡಿ, ನೀವಾದರೂ ದೇಶ ಉದ್ಧಾರ ಮಾಡಿ ಎಂದು ತರೂರ್ ಅವರನ್ನು ಲೇವಡಿ ಮಾಡಿದ್ದಾರೆ. ತರೂರ್ ಪೋಸ್ಟ್ ಮಾಡಿರುವ ಫೋಟೋ ಭಾರೀ ಸದ್ದು ಮಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.