ಕಲಬುರ್ಗಿ(ಅ.05): ಮನನೊಂದ ಕಂಡಕ್ಟರ್ ಬಸ್'ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದಲ್ಲಿ ನಡೆದಿದೆ.
ಸಂಚಾರಿ ನಿರೀಕ್ಷಕನೊಬ್ಬ ಕಂಡೆಕ್ಟರ್ ಈರಣ್ಣನ(35) ಮೇಲೆ ದಂಡ ವಿಧಿಸಿದ್ದ. ಇದೇ ವಿಚಾರದಿಂದ ಮನನೊಂದುಕೊಂಡ ಈರಣ್ಣ ಕಳೆದ ರಾತ್ರಿ ಬಸ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಸದ್ಯ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಈ ದಾಖಲಾಗಿದೆ.