ಗಂಗಾ ನದಿಯಲ್ಲಿ ಜಲ ತೀರ್ಥ ಯಾತ್ರೆ

Published : Sep 03, 2018, 12:18 PM ISTUpdated : Sep 09, 2018, 08:47 PM IST
ಗಂಗಾ ನದಿಯಲ್ಲಿ ಜಲ ತೀರ್ಥ ಯಾತ್ರೆ

ಸಾರಾಂಶ

ಗಂಗಾ ನದಿಯಲ್ಲಿ ಜಲ ತೀರ್ಥಯಾತ್ರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಾಲನೆ ನೀಡಿದ್ದಾರೆ. ಅಲಕಾನಂದ ಎಂಬ ಪಂಚತಾರಾ ಐಷಾರಾಮಿ ಪ್ರವಾಸಿ ಹಡಗು ಭಾನುವಾರದಂದು ವಾರಾಣಸಿಯಲ್ಲಿ ತನ್ನ ಮೊದಲ ಸಂಚಾರ ನಡೆಸಿದೆ.

ವಾರಾಣಸಿ: ಜಲ ಪ್ರವಾಸೋದ್ಯಮವನ್ನು  ಉತ್ತೇಜಿಸುವ ನಿಟ್ಟಿನಿಂದ ಗಂಗಾ ನದಿಯಲ್ಲಿ ಜಲ ತೀರ್ಥಯಾತ್ರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಾಲನೆ ನೀಡಿದ್ದಾರೆ. ಅಲಕಾನಂದ ಎಂಬ ಪಂಚತಾರಾ ಐಷಾರಾಮಿ ಪ್ರವಾಸಿ ಹಡಗು ಭಾನುವಾರದಂದು ವಾರಾಣಸಿಯಲ್ಲಿ ತನ್ನ ಮೊದಲ ಸಂಚಾರ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಲ್ಲಿ ಈ ಹಡಗು ಪ್ರಮುಖ ಆಕರ್ಷಣೆ ಎನಿಸಲಿದೆ.

ಅಲಕಾನಂದ ಹಡಗಿನಲ್ಲಿ ಕುಳಿತು ಪ್ರವಾಸಿಗರು ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ನಡೆಯುವ ‘ಗಂಗಾ ಆರತಿ’ ಮತ್ತು ಅಸ್ಸಿ ಘಾಟ್ ನಲ್ಲಿ ನಡೆಯುವ ಸುಭಾ ಎ ಬನಾರಸ್ ಅನ್ನು ವೀಕ್ಷಿಸಬಹುದಾಗಿದೆ. ಹಡಗಿನ ಮೂಲಕ ಗಂಗಾ ನದಿಯಲ್ಲಿ ಸಂಚಾರವನ್ನು ‘ಜಲ ತೀರ್ಥಯಾತ್ರೆ’ ಎಂದೇ ಬಣ್ಣಿಸಲಾಗಿದೆ. 

ಇದರಲ್ಲಿ125 ಮಂದಿ ಕೂರಲು ಅವಕಾಶವಿದೆ. ಇದರಲ್ಲಿ 60 ಹವಾನಿಯಂತ್ರಿತ ಆಸನ  ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಗಂಗಾ ಆರತಿ ಮತ್ತು ಘಾಟ್‌ಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ. 750 ರು. ನೀಡಿ ಪ್ರವಾಸಿಗರು ಎರಡು ಗಂಟೆಗಳ ಕಾಲ ಹಡಗಿನಲ್ಲಿ ಪ್ರಯಾಣಿಸಬಹುದಾಗಿದೆ. ಎಲ್ಲಾ ಹವಾಮಾನದಲ್ಲೂ ಸಂಚರಿಸುವ ಸಾಮರ್ಥ್ಯ ಹೊಂದಿರುವ ಈ ಹಡಗಿನಲ್ಲಿ ಯಾತ್ರಿಕರಿಗೆ ವಾರಾಣಸಿ ಸ್ಥಳ ಮಹಾತ್ಮೆಯನ್ನು ವಿವರಿಸಲಾಗುತ್ತದೆ. ಆರಂಭದಲ್ಲಿ ಹಡಗು ಅಸ್ಸಿ ಘಾಟ್ ಮತ್ತು ಪಂಚಗಂಗಾ ಘಾಟ್ ನಡುವಿನ 12 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲೇ ದಾಖಲೆಯ ಚಳಿ, ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಂಗಳೂರಿನಲ್ಲಿ ಮುಂದಿನ 1 ವಾರ ಹೇಗಿರಲಿದೆ?
Share Market: ರಿಲಯನ್ಸ್ ಷೇರಿನ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ₹8 ಕೋಟಿ ವಂಚನೆ!