
ಬೆಂಗಳೂರು (ಫೆ.02): ನಿನ್ನೆ ಸಿಎಂ ಸಿದ್ದರಾಮಯ್ಯ ಸಚಿವ ಖಾದರ್ ಮನೆಗೆ ಡಿನ್ನರ್'ಗೆ ಹೋಗಿದ್ರು. ಖಾದರ್ ಮನೆಯ ಬಳಿಯೇ ಸಂತೋಷ್ ಮನೆ ಇದೆ. ಸಾಂತ್ವನ ಹೇಳುವ ಕೆಲಸವನ್ನೂ ಸಿದ್ದರಾಮಯ್ಯ ಮಾಡಿಲ್ಲ ಎಂದು ಶೋಭಾ ಕರಂದ್ಲಾಜೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಲ್ಲಿ ಕೊಲೆಗಳು ನಡೆದಿವೆಯೊ ಅದೇ ಏರಿಯಾಗೆ ಹೊಗಿ ಡಿನ್ನರ್ ಮಾಡಿ ಸಿಎಂ ಸಂಭ್ರಮಿಸಿದ್ದಾರೆ. ಗಣಪತಿ ಕೇಸಲ್ಲಿ ಕೆಜಿ ಜಾರ್ಜ್ ಆರೋಪಿಯಾಗಿದ್ದರು. ಜಿ.ಪರಮೇಶ್ವರ್ ಗೃಹ ಸಚಿವರಾಗಿದ್ದಾಗ ಅವರಿಗೆ ಮರ್ಯಾದೆ ನೀಡಲಿಲ್ಲ. ಜಿ.ಪರಮೇಶ್ವರ್ ಅವರಿಗೆ ಪೊಲೀಸ್ ಮಂತ್ರಿ ಎಂದು ಕರೆದ್ರು ಪರಮೇಶ್ವರ್ ದಲಿತ ಅನ್ನೋ ಕಾರಣಕ್ಕೆ ಘನತೆ ನೀಡದೇ ಗೃಹ ಸಚಿವ ಸ್ಥಾನ ಬದಲಾಯಿಸಿದ್ರು. ರಾಮಲಿಂಗ ರೆಡ್ಡಿ ಗೃಹ ಸಚಿವರಾದ ನಂತರ ಎಲ್ಲಾ ಕೊಲೆಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗುತ್ತಿದೆ. ಸ್ಕ್ರೂ ಡ್ರೈವರ್ ನಿಂದ ಚುಚ್ಚಿದ್ದು, ಕೊಲೆ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾರೆ. ರಾಮಲಿಂಗ ರೆಡ್ಡಿ ಯಾವಾಗ ತನಿಖಾಧಿಕಾರಿ ಆಗಿದ್ದೀರಿ. ಶೇಮ್ ಶೇಮ್ ಗೃಹ ಮಂತ್ರಿಗಳೆ... ಎಂದು ಶೋಭ ಕರಂದ್ಲಾಜೆ ಹೇಳಿದ್ದಾರೆ.
ಕರ್ನಾಟಕದಲ್ಲಿ ಅರಾಜಕತೆ ತಾಂಡವವಾಡುತ್ತಾ ಇದೆ. ದೇಶದಲ್ಲಿ ಹೆಚ್ಚು ಅಪರಾಧ ನಡೆಯುವ ನಗರವಾಗಿ ರಾಜ್ಯ ಸರ್ಕಾರ ಬೆಂಗಳೂರನ್ನು ಮಾಡಿದೆ. ಸರ್ಕಾರ ಮನಬಂದಂತೆ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದೆ. ಸ್ವಜನ ಪಕ್ಷಪಾತ ಮಾಡುವ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಕ್ಕೆ ನಿಯೋಜನೆ ಮಾಡಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ 3500 ಕೊಲೆ ನಡೆದಿದೆ. ಟಾರ್ಗೆಟ್ ಮಾಡಿ ಬಿಜೆಪಿ ಕಾರ್ಯಕರ್ತರ ಕೊಲೆ ನಡೀತಾ ಇದೆ. ಅಪರಾಧಿಗಳಿಗೆ ಸರ್ಕಾರ ಕಂಡರೆ ಭಯ ಇರಬೇಕು ಆದ್ರೆ ಅಪರಾಧಿಗಳಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ. ಯಾವ ಜಿಲ್ಲೆಗೆ ಸಿಎಂ ಹೋಗ್ತಾರೋ ಅದೇ ಜಿಲ್ಲೆಗಳಲ್ಲಿ ಕೊಲೆಗಳು ನಡೀತಾ ಇದೆ. ಮಂಗಳೂರು ಹೋದಾಗ ದೀಪಕ್ ಕೊಲೆ ಆಗುತ್ತೆ. ಅದೇ ರೀತಿ ಪರೇಶ್ ಮೇಸ್ತಾ, ದಾನಮ್ಮ ಅತ್ಯಾಚಾರ ಕೂಡ ಸಿಎಂ ಭೇಟಿ ವೇಳೆ ನಡೆದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.