ದೇವೇಗೌಡ್ರು ನನ್ನ ಬೆಳೆಸಿಲ್ಲ; ನನ್ನ ಸ್ವಂತ ಬಲದಿಂದ ಬೆಳೆದಿದ್ದೇನೆ: ಸಿಎಂ

Published : Feb 28, 2018, 01:13 PM ISTUpdated : Apr 11, 2018, 01:02 PM IST
ದೇವೇಗೌಡ್ರು ನನ್ನ ಬೆಳೆಸಿಲ್ಲ; ನನ್ನ ಸ್ವಂತ ಬಲದಿಂದ ಬೆಳೆದಿದ್ದೇನೆ: ಸಿಎಂ

ಸಾರಾಂಶ

ಪ್ರಧಾನಿ ಮೋದಿ ಮಾತಿಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ.  ಮೋದಿ ಕೀಳು ಮಟ್ಡದ ರಾಜಕೀಯ ಮಾಡ್ತಾ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. 

ಕೊಪ್ಪಳ (ಫೆ. 28): ಪ್ರಧಾನಿ ಮೋದಿ ಮಾತಿಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ.  ಮೋದಿ ಕೀಳು ಮಟ್ಡದ ರಾಜಕೀಯ ಮಾಡ್ತಾ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. 

ರೈತರನ್ನು ಕೊಂದವರನ್ನು ಮೋದಿ ರೈತ ಬಂಧು ಅಂತಾ ಬಿರುದು ಕೊಡ್ತಾರೆ. ಹಾವೇರಿಯಲ್ಲಿ ಗೋಲಿಬಾರ್ ಮಾಡಿಸಿ ರೈತರನ್ನು ಕೊಂದವರು ಯಾರು ಎಂದು ಪ್ರಶ್ನಿಸಿದ್ದಾರೆ. ಇವರೆಲ್ಲಾ ರೈತ ಬಂಧು ಅಲ್ಲ. ಇವರೆಲ್ಲಾ ಡೋಂಗಿಗಳು. ರೈತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ. ಮಹದಾಯಿ ಸಮಸ್ಯೆಯನ್ನು  ಪ್ರಧಾನಿ ಮೋದಿ ಮಾತ್ರ ಬಗೆಹರಿಸಬಹುದು. ಕುಮಾರಸ್ವಾಮಿಯವರು ಅಧಿಕಾರದಲ್ಲೇ ಇದ್ದರೂ ಆಗ ಏನು ಮಾಡಲಿಲ್ಲ. ಒಟ್ಟಿನಲ್ಲಿ ಇವರಿಗೆ ರೈತರ ಬಗ್ಗೆ ನಯಾಪೈಸೆ ಕಾಳಜಿ ಇಲ್ಲ ಎಂದು ಸಿಎಂ ಹೇಳಿದ್ದಾರೆ. 

ಪ್ರಧಾನಿಯವರು ಅವರ ಸ್ಥಾನ ಮತ್ತು ಘನತೆಯನ್ನು ಹಾಳು ಮಾಡಿದ್ದಾರೆ.  ಮೋದಿ ಒಬ್ಬ ಚೌಕಿದಾರ ಅಂತಾರೆ. ನೀರವ್ ಮೋದಿ,ಲಲಿತಾ ಮೋದಿ ದೇಶ ಬಿಟ್ಟು ಹೋಗಲು ಪ್ರಧಾನಿ ಕುಮ್ಮಕ್ಕು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. 

ಮೋದಿಗೆ ಭಷ್ಟ್ರಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ದಾಖಲೆ ಕೊಟ್ಟು ನಮ್ಮ  ಭ್ರಷ್ಟಾಚಾರದ ಬಗ್ಗೆ ಮಾತನಾಡಲಿ. ನಾವು ಜನರಿಗೆ ಲೆಕ್ಕ ಕೊಡ್ತೀವಿ. ಅಮಿತ್ ಶಾ ಗೆ ಅಲ್ಲ ಎಂದು ಟಾಂಗ್ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ನನ್ನನ್ನು ದೇವೆಗೌಡರು ಬೆಳೆಸಿಲ್ಲ ಯಾರು ಬೆಳೆಸಿಲ್ಲ. ನಾನೇ  ನನ್ನ ಸ್ವಂತ ಬಲದ ಮೇಲೆ ಬೆಳೆದಿದ್ದೇನೆ ಎಂದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!