
ವಿಧಾನಸೌಧ(ಅ.18): ಹ್ಯೂಬ್ಲೋಟ್ ಗಿಫ್ಟ್ ಪ್ರಕರಣ ಸಿಎಂ ಸಿದ್ದರಾಮಯ್ಯನವರನ್ನ ಎಷ್ಟರಮಟ್ಟಿಗೆ ಹೈರಾಣಾಗಿಸಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ಗಿಫ್ಟ್ ಎಂದರೆ ಸಿಎಂ ಸಿದ್ದರಾಮಯ್ಯ ಬೆಚ್ಚಿ ಬೀಳುವ ಹಂತಕ್ಕೆ ತಂದು ನಿಲ್ಲಿಸಿದೆ.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಇವತ್ತು ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಂದರ್ಭ ಸಿಲ್ಕ್ ಬೋರ್ಡ್ ನಿರ್ದೇಶಕಿ ನೀಲಾ ಮಂಜುನಾಥ್ ನೀಡಿದ ಪ್ಯಾಕ್ ಮಾಡಿದ್ದ ಗಿಫ್ಟ್ ಅನ್ನ ಸಿಎಂ ಸಿದ್ದರಾಮಯ್ಯ ನಿರಾಕರಿಸಿದ ಘಟನೆ ನಡೆದಿದೆ. ನೀಲಾ ಮಂಜುನಾಥ್ ನೀಡಿದ ಗಿಫ್ಟ್ ಅನ್ನ ಸಚಿವ ಎ. ಮಂಜು ಅವರು ಸಿಎಂಗೆ ನೀಡಲು ಮುಂದಾದರು. ಈ ಸಂದರ್ಭ ೇನದು ಎಂದು ಪ್ರಶ್ನಿಸಿದ ಸಿಎಂ, ಗಿಫ್ಟ್ ಸಹವಾಸ ಬೇಡಪ್ಪಾ ಎಂದು ತಳ್ಳ್ಳಿದ್ದಾರೆ.
ವಾಚ್ ಗಿಫ್ಟ್ ವಿವಾದದ ಗುಂಗಿನಿಂದ ಸಿಎಂ ಸಿದ್ದರಾಮಯ್ಯ ಹೊರಬರದೇ ಇರುವುದು ಇದರಿಂದ ಸ್ಪಷ್ಟವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.