‘ಎಲೆಕ್ಷನ್ ಟೈಮ್’ನಲ್ಲಿ ಮಾತ್ರ ರೈತರನ್ನು ಭೇಟಿಯಾದ್ರೆ ಹೀಗೇ ಆಗೋದು ಅಮಿತ್ ಶಾರವರೇ’

Published : Feb 26, 2018, 05:01 PM ISTUpdated : Apr 11, 2018, 12:38 PM IST
‘ಎಲೆಕ್ಷನ್ ಟೈಮ್’ನಲ್ಲಿ ಮಾತ್ರ ರೈತರನ್ನು ಭೇಟಿಯಾದ್ರೆ ಹೀಗೇ ಆಗೋದು ಅಮಿತ್ ಶಾರವರೇ’

ಸಾರಾಂಶ

ಸಭೆಯೊಂದರಲ್ಲಿ  ರೈತರೊಬ್ಬರಿಗೆ ಮಾತನಾಡಲು ಅವಕಾಶ ನಿರಾಕರಣೆ ಸಿಎಂ ಸಿದ್ದರಾಮಯ್ಯ ಟ್ವಿಟರ್’ನಲ್ಲಿ ಪ್ರತಿಕ್ರಿಯೆ

ಬೆಂಗಳೂರು:  ಬೀದರ್’ನಲ್ಲಿ ರೈತರೊಂದಿಗೆ ನಡೆದ ಸಭೆಯೊಂದರಲ್ಲಿ  ರೈತರೊಬ್ಬರಿಗೆ ಮಾತನಾಡಲು ಅವಕಾಶ ನೀಡದಿರುವ ಘಟನೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

‘ಎಲೆಕ್ಷನ್ ಟೈಮ್’ನಲ್ಲಿ ಮಾತ್ರ ರೈತರನ್ನು ಭೇಟಿಯಾದ್ರೆ ಇದೇ ಆಗೋದು ಅಮಿತ್ ಶಾರವರೇ, ಎಂದು ಸಿಎಂ ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.

ನಿನ್ನೆ ಬೀದರ್’ನ ಹುಮ್ನಾಬಾದ್’ನಲ್ಲಿ ಕಬ್ಬುಬೆಳೆಗಾರರೊಂದಿಗೆ ನಡೆದ ಸಂವಾದದಲ್ಲಿ ರೈತ ಮುಖಂಡರೊಬ್ಬರು ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಶ್ನಿಸಲು ಆರಂಭಿಸಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿದ ಸಂಘಟಕರು ಅವರಿಂದ ಮೈಕು ಕಿತ್ತುಕೊಂಡಿದ್ದರು. ಈ ಘಟನೆಯಿಂದಾಗಿ ಅಮಿತ್ ಶಾ ಮುಜುಗರ ಎದುರಿಸಬೇಕಾಯಿತು.

ಉದ್ಯಮಿಗಳನ್ನು ಒಲೈಸುವುದರಲ್ಲೇ ಕೇಂದ್ರ ಸರ್ಕಾರ  ತೊಡಗಿಸಿಕೊಂಡಿದೆ. ಕಳೆದ ಮೂರುವರೆ ವರ್ಷದಿಂದ ರೈತರನ್ನು ನಿರ್ಲಕ್ಷಿಸಿ, ಈಗ ಯಾವ ಭರವಸೆ ನೀಡತ್ತೀರಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೊದಲು ರೈತರ ಸಾಲ ಮನ್ನಾ ಮಾಡಿ ಮತ್ತು ಬೆಂಬಲ ಬೆಲೆ ನೀತಿಯನ್ನು ಪ್ರಾಮಾಣಿಕವಾಗಿ ಜಾರಿಗೆ ತನ್ನಿಯೆಂದು ಸಿದ್ದರಾಮಯ್ಯ ಅಮಿತ್ ಶಾಗೆ ಸಲಹೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾ ಚೆನ್ನಾಗಿಲ್ಲ, ನಾ ಬಿಳಿ ಇಲ್ಲ, ನನ್ನ ಕುರೂಪಿ ಅಂತಾರೆ: ಪುಟ್ಟ ಮಗಳ ಅಳು ಕೇಳಲಾಗದೇ ನೆಟ್ಟಿಗರ ಸಲಹೆ ಕೇಳಿದ ತಾಯಿ
ಮೈಸೂರು ಕೆನರಾ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಬಂಗಾರಕ್ಕೆ ಕನ್ನ! 85 ಗುಂಡು ಕೊಟ್ಟರೆ 77 ಮಾತ್ರ ವಾಪಸ್