ಜನರನ್ನೇ ಮರೆತರಾ ಸಿಎಂ ಸಿದ್ದರಾಮಯ್ಯ: 18 ತಿಂಗಳಿಂದ ಮಾಡಿಲ್ಲ ಜನತಾ ದರ್ಶನ

Published : Jun 02, 2017, 08:22 AM ISTUpdated : Apr 11, 2018, 12:40 PM IST
ಜನರನ್ನೇ ಮರೆತರಾ ಸಿಎಂ ಸಿದ್ದರಾಮಯ್ಯ: 18 ತಿಂಗಳಿಂದ ಮಾಡಿಲ್ಲ ಜನತಾ ದರ್ಶನ

ಸಾರಾಂಶ

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಧಿಕಾರಾವಧಿ ಮುಗಿಯಲು ಇನ್ನು ಕೆಲ ತಿಂಗಳು ಮಾತ್ರ ಬಾಕಿ ಇದೆ. ಈಗಾಗಲೇ ಮುಂದಿನ ಚುನಾವಣಗೆ ತಯಾರಿ ಕೂಡ ಭರದಿಂದ ಸಾಗಿದೆ. ಆದರೆ, ಸಿಎಂ ಅವರಿಗೆ ಮೊದಲಿದ್ದ ಆರಂಭಶೂರತ್ವ ಇದೀಗ ಕಿಂಚಿತ್ತೂ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಜನತಾ ದರ್ಶನ.

ಬೆಂಗಳೂರು(ಜೂ.02): ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಧಿಕಾರಾವಧಿ ಮುಗಿಯಲು ಇನ್ನು ಕೆಲ ತಿಂಗಳು ಮಾತ್ರ ಬಾಕಿ ಇದೆ. ಈಗಾಗಲೇ ಮುಂದಿನ ಚುನಾವಣಗೆ ತಯಾರಿ ಕೂಡ ಭರದಿಂದ ಸಾಗಿದೆ. ಆದರೆ, ಸಿಎಂ ಅವರಿಗೆ ಮೊದಲಿದ್ದ ಆರಂಭಶೂರತ್ವ ಇದೀಗ ಕಿಂಚಿತ್ತೂ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಜನತಾ ದರ್ಶನ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ದಿನದಿಂದಲೂ ನಾನು ಜನರ ನಡುವಲ್ಲೇ ಇರುತ್ತೇನೆ. ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸ್ತೀನಿ ಅಂತ ಹೇಳುತ್ತಲೇ ಬಂದಿದ್ದಾರೆ. ಅದರಂತೆ ಮೊದಲು ಕೆಲ ತಿಂಗಳುಗಳ ಕಾಲ ಅದನ್ನ ಪಾಲಿಸಿಕೊಂಡು ಬಂದರೂ ಕೂಡ. ಆದರೆ ಇದೀಗ, ಸಿಎಂ ಜನರನ್ನೇ ಮರೆತಂತಿದೆ.

ಜನರ ನಡುವಲ್ಲೇ ಇರುತ್ತೇನೆ ಎಂದಿದ್ದ ಸಿಎಂ ಸಿದ್ದರಾಮಯ್ಯ ನಿಜಕ್ಕೂ ಜನರನ್ನು ಮರೆತರಾ ಎಂಬ ಪ್ರಶ್ನೆ ಮೂಡುವುದು ಸುಳ್ಳಲ್ಲ. ಯಾಕಂದ್ರೆ ಜನರ ಅಹವಾಲುಗಳನ್ನ ಸ್ವೀಕರಿಸಿ, ಅವರಿಗೆ ಸ್ಪಂದಿಸುವ ಕಾರ್ಯಕ್ರಮವೇ ಸಿಎಂ ಜನತಾ ದರ್ಶನ. ಆದರೆ, ಕಳೆದ 18 ತಿಂಗಳುಗಳಿಂದ ಜನರಿಗೆ ಸಿಎಂ ಅವರ ದರ್ಶನ ಭಾಗ್ಯವೇ ಇಲ್ಲದಂತಾಗಿದೆ.

ಜನರನ್ನೇ ಮರೆತರಾ ಸಿಎಂ ಎಂಬ ಅನುಮಾನ ಕಾಡದೇ ಇರಲ್ಲ. ಯಾಕೆಂದರೆ ಕಳೆದ 18 ತಿಂಗಳಿನಿಂದ ಮುಖ್ಯಮಂತ್ರಿ ಜನತಾ ದರ್ಶನವನ್ನೇ ಮಾಡಿಲ್ಲ. ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಆರಂಭಶೂರತ್ವ ತೋರಿದ್ದ ಸಿಎಂ, 2013ರಲ್ಲಿ 9 ಬಾರಿ ಜನತಾ ದರ್ಶನ ನಡೆಸಿದ್ದರು. ಬಳಿಕ 2016ರಿಂದ ಇಲ್ಲಿಯವರೆಗೂ ಒಂದೂ ಜನತಾ ದರ್ಶನ ಮಾಡಲೇ ಇಲ್ಲ. 2015ರ ನವೆಂಬರ್ ತಿಂಗಳಲ್ಲಿ ಸಿಎಂ ಕಡೆಯ ಜನತಾ ದರ್ಶನ ಮಾಡಿದ್ದರು. ಇನ್ನು, ಚುನಾವಣಾ ಪ್ರಚಾರಕ್ಕೆ ಹೋಗಲು ಸಿಎಂ ಸಾಹೇಬರಿಗೆ ಸಮಯವಿದೆ ಅಲ್ಲದೇ, ದಿನಕ್ಕೆ ಎರಡು ಬಾರಿ ಸಿನಿಮಾ ನೋಡಲು ಸಮಯವಿರುತ್ತೆ. ಆದರೆ, ಜನತಾ ದರ್ಶನ ಮಾಡಲು ಮಾತ್ರ ಮುಖ್ಯಮಂತ್ರಿಗಳಿಗೆ ಸಮಯವಿಲ್ಲ.

ಒಟ್ಟಿನಲ್ಲಿ, ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಆರಂಭದಲ್ಲಿ ಇದ್ದ ಕಾಳಜಿ, ಕಳೆದ ಒಂದೂವರೆ ವರ್ಷದಿಂದ ಕಾಣದಾಗಿದೆ. ಇದಕ್ಕೆ ಮುಖ್ಯಮಂತ್ರಿಗಳೇ ಉತ್ತರ ನೀಡಬೇಕಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ
ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?