ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ: ನದಿಯಲ್ಲಿ ದೊರೆತ ಮೂಳೆ ಮಾನವ ದೇಹದ್ದು

Published : Sep 16, 2016, 03:33 PM ISTUpdated : Apr 11, 2018, 12:54 PM IST
ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ: ನದಿಯಲ್ಲಿ ದೊರೆತ ಮೂಳೆ ಮಾನವ ದೇಹದ್ದು

ಸಾರಾಂಶ

ಉಡುಪಿ (ಸೆ.16): ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಹೋಮಕುಂಡ ಹತ್ಯೆ ಪ್ರಕರಣದ ಸಿಐಡಿ ತನಿಖೆ ನಿರ್ಣಾಯಕ ಘಟ್ಟ ತಲುಪಿದೆ.

ಇದೇ ಮೊದಲಿಗೆ ಪ್ರಮುಖ ಆರೋಪಿ ನಿರಂಜನ ಭಟ್ಟನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಸಿಐಡಿ ತನಿಖೆಯಲ್ಲೂ ಮಹತ್ವದ ಅಂಶಗಳು ಹೊರಬಂದಿದೆ.

ಆದರೆ ಎಲ್ಲ ವಿವರಗಳನ್ನು ಸಿಐಡಿ ತಂಡ ರಹಸ್ಯವಾಗಿರಿಸಿದೆ. ಭಾಸ್ಕರ ಶೆಟ್ಟಿ ಕುಂಟುಂಬ ಅಥವಾ ಬಂಧುಗಳು ಮಾಧ್ಯಮಗಳಿಗೆ ಮಾತನಾಡದಂತೆ ತಾಕೀತು ಮಾಡಿದ್ದಾರೆ.

ಒಟ್ಟು 68 ಬಗೆಯ ಸ್ಯಾಂಪಲ್ ಗಳನ್ನು ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪೈಕಿ ನದಿಯಲ್ಲಿ ದೊರೆತಿರುವ ಮೂಳೆಗಳು ಮಾನವ ದೇಹದ್ದೇ ಎಂದು ಸಾಬೀತಾಗಿದೆ. ಅದು ಭಾಸ್ಕರ ಶೆಟ್ಟಿಯದ್ದೇ ಎಂಬುವುದು ಇನ್ನಷ್ಟೇ ತಿಳಿಯಬೇಕಾಗಿದೆ.

ಉಡುಪಿಯ ಖಾಸಗಿ ಬ್ಯಾಂಕ್ ನಲ್ಲಿ ಭಾಸ್ಕರ ಶೆಟ್ಟರಿಗೆ ಆರೂವರೆ ಕೋಟಿ ಸಾಲವಿದ್ದು, ಅದರ ವಸೂಲಾತಿಗೆ ಬ್ಯಾಂಕ್ ತಲೆಕೆಡಿಸಿಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ