ಆರ್'ಎಸ್ಎಸ್ ರುದ್ರೇಶ್'ನಂತೆ ಮಾಜಿ ಸಚಿವರ ಬೆಂಬಲಿಗನನ್ನು ಒಂದೇ ಏಟಿಗೆ ಮುಗಿಸಿದರು

Published : Nov 16, 2016, 01:07 PM ISTUpdated : Apr 11, 2018, 12:54 PM IST
ಆರ್'ಎಸ್ಎಸ್ ರುದ್ರೇಶ್'ನಂತೆ ಮಾಜಿ ಸಚಿವರ ಬೆಂಬಲಿಗನನ್ನು ಒಂದೇ ಏಟಿಗೆ ಮುಗಿಸಿದರು

ಸಾರಾಂಶ

ಈತನ ಮೇಲೆ ಈಗಾಗಲೆ ನಾಲ್ಕು ಬಾರಿ ಹತ್ಯಾ ಯತ್ನ ನಡೆದಿತ್ತು. ಒಮ್ಮೆ ಕೈಬಾಂಬು ಹಾಕುವ ಮೂಲಕವೂ ಕೊಲೆಗೆ ಯತ್ನಿಸಲಾಗಿತ್ತು. ಅದರೆ ಇವೆಲ್ಲವನ್ನೂ ಗೆದ್ದು ಬಂದಿದ್ದ

ಚಿಕ್ಕಬಳ್ಳಾಪುರ(ನ.16): ಇತ್ತೀಚಿಗಷ್ಟೆ  ಆರ್'ಎಸ್ಎಸ್ ಕಾರ್ಯಕರ್ತ ರುದ್ರೇಶ್' ಅವರನ್ನು  ಆರೋಪಿಗಳಿಬ್ಬರು ಬೈಕ್'ನಲ್ಲಿ ಬಂದು ಒಂದೇ ಏಟಿಗೆ ಕುತ್ತಿಗೆಗೆ ಹೊಡೆದು ಹತ್ಯೆ ಮಾಡಿದ್ದರು. ಇದೇ ರೀತಿಯ ಘಟನೆ  ಚಿಕ್ಕಬಳ್ಳಾಪುರದಲ್ಲಿ  ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷ ಗುರುತಿಸಿಕೊಂಡು ಮಾಜಿ ಸಚಿವ ವಿ. ಮುನಿಯಪ್ಪ ಬೆಂಬಲಿಗನಾಗಿದ್ದ  ಚಿಕ್ಕಬಳ್ಳಾಪುರ ನಗರದ ವೆಂಕಟರಮಣಪ್ಪ ಉರುಫ್ ಮಿಲ್ಟ್ರಿ ವೆಂಕಟರಮಣ ಎಂಬುವರರನ್ನು ಒಂದೇ ಏಟಿಗೆ ಕೊಲೆ ಮಾಡಲಾಗಿದೆ.

ಈತನ ಮೇಲೆ ಈಗಾಗಲೆ ನಾಲ್ಕು ಬಾರಿ ಹತ್ಯಾ ಯತ್ನ ನಡೆದಿತ್ತು. ಒಮ್ಮೆ ಕೈಬಾಂಬು ಹಾಕುವ ಮೂಲಕವೂ ಕೊಲೆಗೆ ಯತ್ನಿಸಲಾಗಿತ್ತು. ಅದರೆ ಇವೆಲ್ಲವನ್ನೂ ಗೆದ್ದು ಬಂದಿದ್ದ ಈತ ಇವತ್ತು ಶೇವಿಂಗ್ ಶಾಪ್'ನಲ್ಲಿ ಒಂದೇ ಏಟಿಗೆ ಬಲಿಯಾಗಿದ್ದಾನೆ.  ಬೆಳಗ್ಗೆ ಮನೆಯಿಂದ ಹೊರಬಂದು ದ್ವಿಚಕ್ರವಾಹನದಲ್ಲಿ ಸೆಲೂನ್ ಕಡೆ ಹೊರಟ ಈತನಿಗೆ ತನ್ನ ಸಾವಿನ ಬಗ್ಗೆ ಕಿಂಚಿತ್ತು ಸಂಶಯ ಇರಲಿಲ್ಲ. ಏಕಾಏಕಿ ನಡೆದಿರುವ ಈ ಘಟನೆಯಿಂದ ಇಡೀ ಕುಟುಂಬ ದಿಗ್ಬ್ರಮೆಗೊಂಡಿದೆ. ಸ್ಥಳಕ್ಕೆ ಎಸ್ಪಿ ಚೈತ್ರಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಮನಗರ: ಅತ್ತೆ ಸೊಸೆ ಜಗಳ: 19 ವರ್ಷದ ಗರ್ಭಿಣಿ ಸೊಸೆ ನಯನಾ ಸಾವಿಗೆ ಶರಣು
Karnataka CHC downgrade: ರಾಜ್ಯದ 230 ಆರೋಗ್ಯ ಸಮುದಾಯ ಕೇಂದ್ರಗಳಿಗೆ ಕುತ್ತು?